- Advertisement -
ಬೀದರ – ಇದು ಬ್ರಿಮ್ಸ್ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಶೋಚನೀಯ ಪರಿಸ್ಥಿತಿ. ಧಾರಾಕಾರ ಮಳೆ ಬಂದು ಆಸ್ಪತ್ರೆಯ ನೆಲಮಹಡಿಯಲ್ಲಿ ನಿಂತ ನೀರು ಮತ್ತಷ್ಟು ರೋಗಗಳಿಗೆ ತಾಣವಾಗುತ್ತಿದ್ದು ಆಸ್ಪತ್ರೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯವೋ ಬೇಜವಾಬ್ದಾರಿಯೋ….ಏನಿದು ? ಎಂದು ಕೇಳುವಂತಾಗಿದೆ.
ಸ್ವಚ್ಚತೆ ಇರಬೇಕಾದ ಜಾಗದಲ್ಲೇ ಅಶುಚಿತ್ವ ಇದ್ದು ಇಂಥ ಆಸ್ಪತ್ರೆಗೆ ಬಂದ ರೋಗಿಗಳ ಸ್ಥಿತಿ ಶೋಚನೀಯ ಅನ್ನಿಸುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಅವರು ಈ ಕುರಿತು ದಿವ್ಯ ನಿರ್ಲಕ್ಷ್ಯ ವಹಿಸಿದ್ದು ಕೂಡ ಕಂಡುಬರುತ್ತಿದೆ.
- Advertisement -
ಯಾಕೆ ಈ ತರದ ಬೇಜಾವಾಬ್ದಾರಿ ಎಂಬುದು ಸಾರ್ವಜನಿಕರಿಗೆ ಅರ್ಥವಾಗುತ್ತಿಲ್ಲ. ಈ ಅವ್ಯವಸ್ಥೆ, ಕೊಳಚೆ ನೀರು ಆಡಳಿತ ಮಂಡಳಿಯ ಕಣ್ಣಿಗೆ ಕಾಣುವುದಿಲ್ಲವೆ ? ಬ್ರಿಮ್ಸ್ ನಿರ್ದೇಶಕರು ಡಾ.ಶಿವಕುಮಾರ ಹಾಗೂ ಮೆಡಿಕಲ್ ಸುಪರಿಂಟೆಂಡೆಂಟ್ ಡಾ.ಶಿವಕುಮಾರ್ ಶೆಟ್ಕರ್ ಯಾಕೆ ಈ ಅವಸ್ಥೆಯನ್ನು ನೋಡಿಲ್ಲ ಎಂಬುದು ಪ್ರಶ್ನೆಯಾಗಿದೆ.