spot_img
spot_img

ಜನ ಸಾಯುವಾಗ ಇವರಿಗೆ ಕುರ್ಚಿ ಬೇಕಾಗಿದೆ – ರಾಜಶೇಖರ ಪಾಟೀಲ ಲೇವಡಿ

Must Read

- Advertisement -

ಬೀದರ – ರಾಜ್ಯದಲ್ಲಿ ಜನರು ಸಾಯುತ್ತಿರುವಾಗ ಬಿಜೆಪಿಯವರಿಗೆ ಕುರ್ಚಿ ಬೇಕಾಗಿದೆ. ಒಬ್ಬರು ಮುಖ್ಯಮಂತ್ರಿ ಆಗಬೇಕು ಅನ್ನುತ್ತಾರೆ, ಇನ್ನೊಬ್ನರಿಗೆ ಮಂತ್ರಿ ಸ್ಥಾನ ಬೇಕು ಅನ್ನುತ್ತ ತಾವೇ ಬಡಿದಾಡುತ್ತಿದ್ದಾರೆ ಯಾರ ಫೋನ್ ಟ್ಯಾಪ್ ಆಗುತ್ತದೆ. ಆಡಳಿತ ಪಕ್ಷದ ಶಾಸಕರ ಫೋನೇ ಟ್ಯಾಪ್ ಆಗುತ್ತದೆ ಎಂದರೆ ವಿಪರ್ಯಾಸ ಎಂದು ಹುಮ್ನಾಬಾದ ಶಾಸಕ ರಾಜಶೇಖರ ಪಾಟೀಲ ಹೇಳಿದರು.

ಜಿಲ್ಲೆಯಲ್ಲಿ ಸೊಯಾಬೀನ್ ಬೀಜದ ಕೊರತೆ ಇದೆ ಎಂಬ ಹಿನ್ನೆಲೆಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವುದಕ್ಕೂ ಕೊರತೆಯಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಮಾದ್ಯಮ ಮುಂದೆ ಎದೆ ತಟ್ಟಿ ಹೇಳುತ್ತ, ನಾವು ಮೂರನೇ ಅಲೆಗೆ ತಯಾರ ಇದ್ದೇವೆ ಎಂದು ಹೇಳಿದರೆ ಅದರ ಅರ್ಥ ನಾವು ಏನು ತಿಳಿದು ಕೊಳ್ಳಬೇಕು ಎಂದು ರಾಜಶೇಖರ ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕೋರೋನಾ ಆರ್ಭಟ ಹಿನ್ನೆಲೆಯಲ್ಲಿ ಸಾವು ನೋವು ಆಗಿದೆ ಮತ್ತು ಜಿಲ್ಲೆಯಲ್ಲಿ ಸೊಯಾಬಿನ್ ಬೀಜ ಕೊರತೆ ಉಂಟಾಗುತ್ತದೆ ಇವರು ಅಲ್ಲಿ ಕುರ್ಚಿಗಾಗಿ ಬಡಿದಾಡುತ್ತಿದ್ದಾರೆ ಇದರ ಬಗ್ಗೆ ವಿಚಾರ ಮಾಡಿ ಎಂದು ರಾಜಶೇಖರ ಪಾಟೀಲ ಹೇಳಿದರು.

- Advertisement -

ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಕನ್ನಡದ ರಾಜಾ ಕುಳ್ಳ ಇನ್ನಿಲ್ಲ

ಕನ್ನಡ ಚಿತ್ರರಂಗದ ರಾಜಾಕುಳ್ಳ ಎಂದೇ ಪ್ರಸಿದ್ಧರಾಗಿದ್ದ ಹಾಸ್ಯಚಿತ್ರ ನಟ, ನಿರ್ಮಾಪಕ ದ್ವಾರಕೀಶ ನಿಧನರಾಗಿದ್ದಾರೆ. ಚಿತ್ರರಂಗದ ನಾಯಕ ವಿಷ್ಣುವರ್ಧನ ಅವರ ಆಪ್ತಮಿತ್ರನಾಗಿದ್ದ ದ್ವಾರಕೀಶ ನೂರಾರು ವಿಶಿಷ್ಟ ಚಿತ್ರಗಳಲ್ಲಿ ನಟಿಸಿ,...
- Advertisement -

More Articles Like This

- Advertisement -
close
error: Content is protected !!
Join WhatsApp Group