ಗ್ರಾಮಪಂಚಾಯತಿ ವ್ಯವಸ್ಥೆಯ ಕುರಿತು ಕಾರ್ಯಾಗಾರ

0
644

 

ಮುನವಳ್ಳಿ :ಸ್ಥಳೀಯ ಎಂ ಎಲ್ ಇ ಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ “ಗ್ರಾಮಪಂಚಾಯತಿ ವ್ಯವಸ್ಥೆಯ” ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅರ್ಟಗಲ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್ ಐ ಪತ್ತಾರ ಮಾತನಾಡುತ್ತಾ, “ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮುಖ್ಯ ಕೆಲಸ ಗ್ರಾಮಪಂಚಾಯತಿಯದು ಇರುತ್ತದೆ ಎಂದು ವಿವಿಧ ಯೋಜನೆ ಕುರಿತು ಮಾಹಿತಿ” ನೀಡಿದರು.

ಸಂಸ್ಥೆಯ ಅಧ್ಯಕ್ಷ ಉಮೇಶ್ ಬಾಳಿ ಮಾತನಾಡಿ, “ಗ್ರಾಮ ಪಂಚಾಯತಿಯಲ್ಲಿ ಆಡಳಿತ ವ್ಯವಸ್ಥೆ,ನರೇಗಾ,ರೈತರಿಗೆ ಸಹಾಯ ವ್ಯವಸ್ಥೆ,ಗ್ರಾಮಸ್ವರಾಜ್ಯ ಈ ಕುರಿತು” ತಿಳಿಸಿದರು. ಆಡಳಿತಾಧಿಕಾರಿ ಎಸ್ ಆರ್ ಜಗಾಪುರ,ಮುಖ್ಯ ಶಿಕ್ಷಕ ಎಚ್ ಕೆ ಯಡೊಳ್ಳಿ ಭಾಗವಹಿಸಿದ್ದರು. ಎ ವಿ ನರಗುಂದ ಸ್ವಾಗತಿಸಿದರು, ಆರ್ ಜಿ ಮಲಾಪುರಮಠ ವಂದಿಸಿದರು.