- Advertisement -
ಮುನವಳ್ಳಿ – ಪಟ್ಟಣದ ಶ್ರೀ ವ್ಹಿ ಪಿ ಜೇವೂರ ಸ್ಮಾರಕ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯಲ್ಲಿ ವಿಶ್ವ ಶ್ರವಣ ದಿನಾಚರಣೆ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುತ್ತೂರ (ಇಂಜಿನಿಯರ್) ಮುನವಳ್ಳಿ ಇವರು ಕೂಡ ಉಪಸ್ಥಿತರಿದ್ದರು. ವಿಶೇಷ ಶಿಕ್ಷಕರಾದ ಶಿವು ಕಾಟಿ ಇವರು ಕೂಡ ಮಕ್ಕಳ ಶ್ರವಣ ನ್ಯೂನತೆ ತಡೆಗಟ್ಟಲು ಬೇಗ ಗುರುತಿಸುವುದು ಮಕ್ಕಳಿಗೆ ಬಾಲ್ಯದಲ್ಲಿ ಶ್ರವಣ ದೋಷ ಕಂಡು ಬಂದಲ್ಲಿ ಚಿಕಿತ್ಸೆ ಕೊಡುವುದರ ಮೂಲಕ ತಡೆಗಟ್ಟಬಹುದೆಂದು ಮಾತನಾಡಿದರು.
ಅಜಯ ಕಂಬನ್ನವರ ನಿರೂಪಿಸಿದರು. ಮುಖ್ಯೋಪಾಧ್ಯಾಯರಾದ ಲಾಲಸಾಬ ವಟ್ನಾಲ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.