ಬೆಂಗಳೂರು – ಸರ್ವೋದಯ ದಿನದ ಅಂಗವಾಗಿ ಬೆಂಗಳೂರು ಶಿವಾನಂದ ವೃತ್ತದ ಗಾಂಧೀ ಭವನದ ಬಳಿ ಇರುವ ಕರ್ನಾಟಕ ಸರ್ವೋದಯ ಮಂಡಳಿ – ಅಮರ ಬಾಪು ಚಿಂತನ ಸಹಯೋಗದಲ್ಲಿ ಗಾಂಧೀಜಿ ಕುರಿತ ಲಿಖಿತ ರಸಪ್ರಶ್ನೆ ಸ್ಪರ್ಧೆಯನ್ನು ಜನವರಿ 30 ರಂದು ಬೆಳಿಗ್ಗೆ 10.30 ಕ್ಕೆ ಏರ್ಪಡಿಸಲಾಗಿದೆ.
ಅರ್ಧ ಘಂಟೆ ಕಾಲಾವಧಿಯ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರು 94480 27400 ಸಂಖ್ಯೆ ವಾಟ್ಸಪ್ ನಲ್ಲಿ ಜ.28 ಸಂಜೆ 5 ರವರೆಗೆ ತಮ್ಮ ಹೆಸರುಗಳನ್ನು ನೊಂದಾಯಿಸಿಬಹುದು ಎಂದು ಡಾ. ಹೆಚ್. ಎಸ್. ಸುರೇಶ್, ಕಾರ್ಯದರ್ಶಿ, ಕರ್ನಾಟಕ ಸರ್ವೋದಯ ಮಂಡಲ, ಬೆಂಗಳೂರು ಇವರು ತಿಳಿಸಿರುತ್ತಾರೆ.