ಭಾರತ ಚೀನಾ ಗಡಿ ಪ್ರದೇಶದ ಗಲ್ವಾನ್ ನಲ್ಲಿ ಎರಡೂ ದೇಶಗಳ ಸೈನಿಕರ ಮಧ್ಯೆ ನಡೆದ ಬಡಿದಾಟಕ್ಕೆ ಇಂದು ಒಂದು ವರ್ಷ.
ಸಂಚುಕೋರ ಚೀನಾ ದೇಶದ ಸೈನಿಕರು ನಿಶ್ಯಸ್ತ್ರರಾಗಿದ್ದ ಭಾರತೀಯ ಸೈನಿಕರ ಮೇಲೆ ಒಮ್ಮೆಲೆ ದಾಳಿ ಮಾಡಿದ್ದರು. ಇದರಿಂದ ಭಾರತದ ಇಪ್ಪತ್ತು ಸೈನಿಕರು ಹುತಾತ್ಮರಾಗಿದ್ದರು. ಆದರೂ ಅವರ ದಾಳಿಗೆ ತಕ್ಕ ಪ್ರತ್ಯುತ್ತರ ಕೊಟ್ಟಿದ್ದ ಭಾರತೀಯ ಸೈನಿಕರು ಚೀನಾದ ನಲವತ್ತು ಸೈನಿಕರನ್ನು ಬಲಿತೆಗೆದುಕೊಂಡಿದ್ದರು.
ಇಂದು ಭಾರತೀಯ ಸೈನಿಕರ ಶೌರ್ಯ ದಿನ. ಚೀನಾದ ಕುತಂತ್ರ, ಅದರ ಗಡಿ ವಿಸ್ತರಣಾ ನೀತಿಗೆ ಭಾರತದ ಪ್ರಧಾನಿ ತಕ್ಕ ಉತ್ತರ ನೀಡಿ, ದೇಶಗಳು ವಿಸ್ತರಣಾ ವಾದವನ್ನು ಕೊನೆಗಾಣಿಸಬೇಕು ಎಂದು ಹೇಳಿದ್ದರಲ್ಲದೆ ಭಾರತವನ್ನು ಕೆಣಕುವ ಯಾವುದೇ ಶಕ್ತಿಗೆ ಅದೇ ಧಾಟಿಯಲ್ಲಿ ಉತ್ತರ ನೀಡುವುದಾಗಿ ಎಚ್ಚರಿಸಿದ್ದರು.
ಗಲ್ವಾನ್ ನ ಈ ಘಟನೆಯನ್ನು ನೆನೆದ ರಕ್ಷಣಾ ತಜ್ಞ ನಿವೃತ್ತ ಜನರಲ್ ಜಿ ಡಿ ಭಕ್ಷಿಯವರು, ಗಲ್ವಾನ್ ನಲ್ಲಿ ನಮ್ಮ ಯೋಧರು ಅತ್ಯಂತ ಶೌರ್ಯದಿಂದ ಹೋರಾಡಿ ಚೀನಾದ ನಲವತ್ತು ಯೋಧರ ಪ್ರಾಣ ತೆಗೆದಿದ್ದರು. ಭಾರತದ ಎದುರು ಚೀನಾದ ಆಟ ನಡೆಯಲಾರದು ಎಂದಿದ್ದಾರೆ.