ಬಿಜೆಪಿ ಅಂದರೆ ಬರೀ ಜೂಟಾ ಪಾರ್ಟಿ- ಖಂಡ್ರೆ

Must Read

ಬೀದರ – ದೇಶದಲ್ಲಿ ಪಂಚರಾಜ್ಯಗಳ ಚುನಾವಣೆ ಇರುವ ಹಿನ್ನೆಲೆಯಲ್ಲಿ ಮತ ಕೇಳಲು ಹೇಗೆ ಹೋಗೋದು ಎಂಬ ಚಿಂತೆಯಿಂದ ಮೂರು ಕೃಷಿ ಕಾಯ್ದೆಗಳನ್ನು ಮೋದಿ ಹಿಂತೆಗೆದುಕೊಂಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಜನತಾ ಪಾರ್ಟಿಯ ವಿರುದ್ಧ ಹರಿಹಾಯ್ದ ಅವರು, ಗಾಂಧೀಜಿಯವರ ಸ್ವರಾಜ್ ಕಲ್ಪನೆಯಲ್ಲಿ ತಾವು ಹೋಗುವುದಾಗಿ ಹೇಳುತ್ತೀರಿ, ಗಾಂಧಿಯನ್ನು ಕೊಂದ ಘೋಡ್ಸೆಯ ಮಂದಿರ ಕಟ್ಟುತ್ತೀರಿ ಏನಿದು ಎಂದು ಪ್ರಶ್ನೆ ಮಾಡಿದರು.

ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ ಬಿಜೆಪಿ ಎಂದರೆ ಬರೀ ಜೂಟಾ ಪಾರ್ಟಿ. ಪ್ರವಾಹ ಪರಿಹಾರ ಕೊಟ್ಟಿಲ್ಲ, ರಸಗೊಬ್ಬರ ಸಿಗುತ್ತಿಲ್ಲ, ಹೀಗೆ ಅನೇಕ ಸುಳ್ಳುಗಳನ್ನು ಅವರು ಹೇಳಿಕೊಂಡು ಬಂದಿದ್ದಾರೆ ಎಂದರು.

ತಾವು ಕೂಡಾ ಬಿಜೆಪಿ ಗೆ ಸೇರ್ಪಡೆಯಾಗುತ್ತೀರಿ ಎಂಬ ಕಟೀಲ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿ, ಅಂಥದೇನೂ ಇಲ್ಲ. ನಳಿನ್ ಕುಮಾರ ಕಟೀಲ್ ಬೇಕಾದರೆ ಕಾಂಗ್ರೆಸ್ ಗೆ ಅರ್ಜಿ ಹಾಕಿದರೆ ನಾನು ಪರಿಶೀಲಿಸುತ್ತೇನೆ ಎಂದು ಖಂಡ್ರೆ ಹೇಳಿದರು

Latest News

ಸಿಂಡಿಕೇಟ್ ಸದಸ್ಯ ಜಗದೀಶ ಭೈರಮಟ್ಟಿಯವರಿಗೆ ಸನ್ಮಾನ

ಬಾಗಲಕೋಟೆ : ತಾಲೂಕಿನ ಬೇವೂರಿನ ಆದರ್ಶ ವಿದ್ಯಾವರ್ಧಕ ಸಂಘ ವಜ್ರಮಹೋತ್ಸವದ ಸಂಭ್ರಮಾಚರಣೆಯ ಹೊಸ್ತಿಲಲ್ಲಿ ಇದ್ದು ಸಂಸ್ಥೆಗೆ ಹಿರಿಮೆಯ ಗರಿ ಹೆಮ್ಮೆ ಎಂಬಂತೆ ಶ್ರೀ ಪರಪ್ಪ ಸಂಗಪ್ಪ...

More Articles Like This

error: Content is protected !!
Join WhatsApp Group