ಸೀರೆ ತೊಟ್ಟುಕೊಂಡು ಬಂದ ಬಾಲಕಿಯರು, ಮದುವಣಗಿತ್ತಿಯಂತೆ ಕಂಗೊಳಿಸಿದ ಶಾಲಾ ಆವರಣ.
ಎಲ್ಲರ ತಲೆ ಮೇಲೊಂದು ಕಲರ್ ಕಲರ್ ಪೇಪರ್ ಟೋಪಿ. ಹೌದು, ಹೀಗೆ ಶಾಲೆಯಲ್ಲೊಂಥರಾ ಹಬ್ಬದ ವಾತಾವರಣ. ಹಾಗಿದ್ರೆ ಏನಿದು ಸಂಭ್ರಮ ಅಂತೀರಾ? ಹೇಳ್ತೀನಿ ನೋಡಿ. ಇದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಿಟದಾಳದಲ್ಲಿ ಜರುಗಿದ ಕಲಿಕಾ ಹಬ್ಬದ ಸಂಭ್ರಮ.
ಶಾಲಾ ಮುಖ್ಯದ್ವಾರದ ಬಳಿ ಕಲಿಕಾ...
ಡಾ. ಸಿಂಪಿಲಿಂಗಣ್ಣನವರು ಜಾನಪದ ಕ್ಷೇತ್ರದಲ್ಲಿ ಮಾಡಿದ ಸಾಧನೆ ನಮಗೆಲ್ಲ ತಿಳಿದ ವಿಷಯ. ಇವರು ಜನಿಸಿದ್ದು ಉತ್ತರ ಕರ್ನಾಟಕದ ಗಡಿನಾಡು ಪ್ರದೇಶ ಚಡಚಣದಲ್ಲಿ. ಇದೇ ಗ್ರಾಮದ ಶಿವಣ್ಣ ಬಿರಾದರ ಇವರಿಗೆ ಬಯಲಾಟ ಕ್ಷೇತ್ರದ ಸಾಧನೆಗೆ ಕರ್ನಾಟಕ ಬಯಲಾಟ ಅಕಾಡೆಮಿ, ಬಾಗಲಕೋಟೆ 2024-25ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾಗಿ ನೆನ್ನೆ ಸೋಮವಾರ (10-2-2025) ಪ್ರಶಸ್ತಿ ಸ್ವೀಕರಿಸಿದರು.
ಎರಡು...
ಮೂಡಲಗಿ : ರಾಜ್ಯ ಸರ್ಕಾರದ ಯಶಸ್ವಿನಿ ಯೋಜನೆ, ಕೇಂದ್ರ ಸರ್ಕಾರ ಆಯುಷ್ಯ್ಮಾನ್ ಭಾರತ ಯೋಜನೆ ಇದೆ. ರೈತರು ಯಶಸ್ವಿನಿ ಯೋಜನೆಯಲ್ಲಿ ನೊಂದಣಿಯಾಗುತ್ತಿಲ್ಲ. ಸಂಘ ಸಂಸ್ಥೆಗಳು ಅದರ ಜವಾಬ್ದಾರಿ ಹೊರಬೇಕು ಎಂದು ಚಿಕ್ಕಮಕ್ಕಳ ತಜ್ಞ ಡಾ ಮಹಾಂತೇಶ ಕಡಾಡಿ ಹೇಳಿದರು
ಮಂಗಳವಾರ ಕಲ್ಲೋಳಿಯ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆ, ಪ್ರಿಯದರ್ಶಿನಿ ಸಹಕಾರಿ ಪತ್ತಿನ ಸಂಘ ಬೆಳಗಾವಿಯವರ ಕೆ.ಎಲ್.ಇ.ಆಸ್ಪತ್ರೆ...
ಬೆ ಳ್ಳಂಬೆಳಗಿನ ಸಕ್ಕರೆಯ ಸವಿ ನಿದ್ದೆ ಸವಿಯುವುದನ್ನು ಬಿಟ್ಟು, ಹಾಸಿಗೆಯಿಂದ ಎದ್ದು, ಮಕ್ಕಳು ಮತ್ತಷ್ಟು ನಿದ್ದೆ ಸವಿಯಲೆಂದು, ಕನಸುಗಳ ಹೊದಿಕೆ ಮತ್ತಷ್ಟು ಸರಿಯಾಗಿ ಹೊದಿಸಿ, ಬೆಚ್ಚನೆ ಮಲಗಿಸಿದ ಜೀವವನು ನೆನೆಯುವದ ಮರೆಯುವುದಾದರೂ ಹೇಗೆ? ಬೆಳಗಾಗುವ ಮುಂಚೆ ಅಂಗಳದ ತುಂಬೆಲ್ಲ ನೀರ ತಳಿ ಹೊಡೆದು, ಬಣ್ಣ ಬಣ್ಣದ ಚಿತ್ತಾರದ ರಂಗೋಲಿಯ ಬಿಡಿಸಿ, ಹಿತ್ತಲಿನ ಗಿಡಗಳಿಗೆ ನೀರುಣಿಸಿ,...
ಸಿಂದಗಿ - ವಿದ್ಯುತ್ ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ರೈತರು, ಗ್ರಾಮೀಣ ಪ್ರದೇಶದ ಜನರು ಹಾಗೂ ನಗರದ ಜನತೆ ಎದುರಿಸಬಾರದು ಎಂದು ಸಿಂದಗಿ ವಿದ್ಯುತ್ ಇಲಾಖೆಯ ಅಡಿಯಲ್ಲಿ ಗ್ರಾಹಕರ ಸಲಹಾ ಸಮಿತಿಯನ್ನು ರಾಜ್ಯ ಸರ್ಕಾರ ರಚನೆ ಮಾಡಿದ್ದು ಸಂತಸ ತಂದಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಅವರು ಪಟ್ಟಣದ ವಿದ್ಯುತ್ ಇಲಾಖೆಯ (ಹೆಸ್ಕಾಂ) ಆವರಣದಲ್ಲಿ...
ಮೂಡಲಗಿ -ತಾಲೂಕಿನ ಕುಲಗೋಡ ಗ್ರಾಮದಲ್ಲಿ 18 ನೆಯ ವರ್ಷದ "ಪಾರಿಜಾತ ಉತ್ಸವ" ಕಾರ್ಯಕ್ರಮ ಜರುಗಿತು.
ಪಾರಿಜಾತಕ್ಕೆ ಬುನಾದಿ ಹಾಕಿದ ಕುಲಗೋಡ ತಮ್ಮಣ್ಣನವರ ಹೆಸರಿನಲ್ಲಿ ಪಾರಿಜಾತ ತರಬೇತಿ ಕೇಂದ್ರ ಸ್ಥಾಪಿಸಿ, ಉತ್ತರ ಕರ್ನಾಟಕದ ಪಾರಿಜಾತ ಕಲೆಗೆ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಡಾ.ಶ್ರೀರಾಮ ಇಟ್ಟಣ್ಣವರ ಅಭಿಪ್ರಾಯ ಪಟ್ಟರು.
ಕುಲಗೋಡ ಗ್ರಾಮದಲ್ಲಿ ಪಾರಿಜಾತ ಪಿತಾಮಹ ಕುಲಗೋಡ ತಮ್ಮಣ್ಣ ಪ್ರತಿಷ್ಠಾನದಿಂದ ಶ್ರೀ...
ಬೆಳಗಾವಿ-ಮಿರಜ್ ವಿಶೇಷ ರೈಲನ್ನು ಪ್ಯಾಸೆಂಜರ್ ರೈಲು ಎಂದು ಪರಿಗಣಿಸಿ ನಿರಂತರ ಸಂಚಾರಕ್ಕೆ ಅನುಮತಿ ನೀಡುವುದು ಸೇರಿದಂತೆ ಧಾರವಾಡವರೆಗಿನ ವಂದೇ ಭಾರತ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸುವ ದಿನಾಂಕವನ್ನು ಆದಷ್ಟು ಬೇಗ ಘೋಷಿಸಲು ಒತ್ತಾಯಿಸಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಅವರನ್ನು ಮಂಗಳವಾರ ಲೋಕಸಭೆಯ ಸಚಿವರ ಕಾರ್ಯಾಲಯದಲ್ಲಿ ಭೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸಲಾಯಿತು ಎಂದು ರಾಜ್ಯಸಭಾ...
ಬಸವಾದಿ ಶರಣರ ವಚನಗಳು ಮಾನವನ ಬದುಕಿನ ದಾರಿಯಲ್ಲಿ ಹಚ್ಚಿಟ್ಟ ದೀಪಗಳು. ಸಮಾನತೆ, ಸಹಕಾರ- ಸಹಬಾಳ್ವೆ, ಸಾಮಾಜಿಕ ನ್ಯಾಯ ಹಾಗೂ ಮಾನವೀಯತೆಯ ಧರ್ಮದ ನುಡಿ ರಚನೆಗಳು. 12ನೇ ಶತಮಾನದ ಶರಣರ ಸ್ವಾನುಭಾವದಿಂದ ಮೂಡಿಬಂದಿರುವ ಈ ಶ್ರೇಷ್ಠ ನುಡಿಗಳು ಇಂದು ನಮಗೆ ಉಳಿದು ಬಂದಿದ್ದೆ ರೋಚಕದ ಸಂಗತಿ. ಶರಣರ ಬಲಿದಾನ ಹಾಗೂ ವೀರಗಾಥೆಯ ಕಾರ್ಯಗಳಿಂದ ಉಳಿದು ಬಂದಿರುವ...
ಮೂಡಲಗಿ: ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ವಿವಿಧ ಬೇಡಿಕೆಗಳ ಈಡೇರಕೆಗಾಗಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಮೂಡಲಗಿ ತಾಲೂಕಾ ಘಟಕದ ಪದಾಧಿಕಾರಿಗಳು ಪಟ್ಟಣದ ತಹಶೀಲ್ದಾರ ಕಛೇರಿ ಆವರಣದಲ್ಲಿ ಸೋಮವಾರ ಎರಡನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಿದರು.
ಈ ಸಮಯದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಮೂಡಲಗಿ ತಾಲೂಕಾ ಅಧ್ಯಕ್ಷ ಎಂ. ಬಿ. ಶೀಗಿಹೊಳಿ ಮಾತನಾಡಿ,...
ಮೂಡಲಗಿ: ‘೧೨ನೇ ಶತಮಾನದಲ್ಲಿ ನಿರ್ಲಕ್ಷಕ್ಕೆ ಒಳಗಾದ ಎಲ್ಲ ಜಾತಿಯ ಶರಣ ಜೀವಿಗಳು ದಲಿತರೆನಿಸಿಕೊಂಡಿದ್ದರು’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.
ಇಲ್ಲಿಯ ತಹಶೀಲ್ದಾರ್ ಕಚೇರಿಯ ಸಭಾಭವನದಲ್ಲಿ ಸೋಮವಾರ ಆಚರಿಸಿದ ಕಾಯಕಜೀವಿ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿ ನಿರ್ಲಕ್ಷಕ್ಕೆ ಒಳಗಾಗಿದ್ದ ಎಲ್ಲ ತಳಸಮುದಾಯವರನ್ನೆಲ್ಲರನ್ನು ಸೇರಿಸಿ ಸಮಾನತೆಯನ್ನು ಸಾರಿದ್ದರು...