ಮಾಸ್ತಮರಡಿಯಲ್ಲಿ ದಿ.13 ರಿಂದ ಜಿಲ್ಲಾ ಮಟ್ಟದ ಕಲಿಕಾ ಹಬ್ಬ

Must Read

ಬೆಳಗಾವಿ – ಜಿಲ್ಲಾಡಳಿತ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಬೆಳಗಾವಿ (ದಕ್ಷಿಣ) ಹಾಗೂ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ  ಹಾಗೂ ಸರಕಾರಿ ಪ್ರೌಢ ಶಾಲೆ ಮಾಸ್ತ ಮರಡಿ  ಬೆಳಗಾವಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ದಕ್ಷಿಣ ಶೈಕ್ಷಣಿಕ ಜಿಲ್ಲಾ ಮಟ್ಟದ ಕಲಿಕಾ ಹಬ್ಬ ವು ಇದೇ ತಿಂಗಳಸೋಮವಾರ 13, ಮಂಗಳವಾರ 14, ಮತ್ತು ಬುಧವಾರ 15 ರಂದು ಮಾಸ್ತಮರಡಿ ಗ್ರಾಮದ ಶಾಲೆಗಳ ಆವರಣದಲ್ಲಿ ಜರುಗಲಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಡಿ ಡಿ ಪಿ ಐ  ಬಸವರಾಜ ನಾಲತವಾಡ ಹೇಳಿದರು.

ಅವರು ಬೆಳಗಾವಿ ಗ್ರಾಮೀಣ ವಲಯದ ಮಾಸ್ತ ಮರಡಿಯಲ್ಲಿ ಜರುಗಿದ ಗ್ರಾಮದ ಮುಖಂಡರು, ಗ್ರಾಮ ಪಂಚಾಯತ ಸದಸ್ಯರು, ಯುವಕ ಸಂಘ ಗಳು ಸೇರಿದoತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಿಕಾ ಹಬ್ಬದ ಕುರಿತು ಸಮಗ್ರ ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಸಮುದಾಯದ ಸಹಕಾರ ಬಯಸಿದರು,ಗ್ರಾಮಸ್ಥರು ಕಲಿಕಾ ಹಬ್ಬವನ್ನು ಉತ್ಸವ,ಜಾತ್ರೆಮಾಡುವ ರೀತಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಯಶಸ್ಸು ಮಾಡಬೇಕು, ಇದೊಂದು ಅವಿಸ್ಮರಣೀಯ ಕಾರ್ಯಕ್ರಮವಾಗಲೆಂದರು

ಪ್ರಾರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಡಿ ವಾಯ್ ಪಿ ಸಿ  ಬಸವರಾಜ ಮಿಲ್ಲಾನಟ್ಟಿ ಯವರು ಮೂರು ದಿನಗಳ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಮಾಡಿದ ಸಾಧನೆ ಮುಂದೆ ಕಲಿಕೆಯಲ್ಲಿ ಸಾಧನೆ ಮಾಡಲು ಪ್ರೋತ್ಸಾಹ ದೊರೆಯಲಿದೆ ಎಂದರು.

ಬಿ ಇ ಓ  ಎಸ ಪಿ ದಾಸಪ್ಪನವರ ಮಾತನಾಡಿ, ಕಾರ್ಯಕ್ರಮದ ಸಫಲತೆಗೆ ಸರ್ವರೂ ಶ್ರಮಿಸಲಿ, ಗ್ರಾಮಕ್ಕೆ,ಇಲಾಖೆಗೆ ಹೆಸರು ಬರುವಂತೆ ಕಾರ್ಯಕ್ರಮ ವಾಗಲೆoದರು. ಬಿ ಆರ್ ಸಿ ಸಮಾನ್ವಯಾಧಿಕಾರಿ ಡಾ, ಎಮ್ ಎಸ್ ಮೇದಾರರವರು ಮಾತನಾಡಿ ಈ ಹಿಂದೆ ಮಾಸ್ತ ಮರಡಿ ಗ್ರಾಮದಲ್ಲಿ ಮಾಡಿದ ಎಲ್ಲಾ ಕಾರ್ಯಕ್ರಮ ಯಶಸ್ವಿ ಯಾಗಿವೆ ಈ ಕಾರ್ಯಕ್ರಮವು ಯಶಸ್ವಿ ಯಾಗುತ್ತದೆ ಗ್ರಾಮಸ್ಥರ ಸಹಕಾರ ಸಿಗುವ ವಿಶ್ವಾಸ ವ್ಯಕ್ತ ಪಡಿಸಿದರು  ಪಿ ವಾಯ್ ಸಿ ಎಸ್ ಎ ನದಾಫ್,  ಶಿಕ್ಷಣ ಸಂಯೋಜಕ ರಾಜೇಂದ್ರ ಕುಮಾರ ಚಲವಾದಿ, ಮುಖ್ಯೋಪಾಧ್ಯಾಯರಾದ ಬಸವರಾಜ ಸುಣಗಾರ ಸಿ ಆರ್ ಪಿ ಎಫ್ ಎಸ್ ಮುಲ್ಲಾ ಗ್ರಾಮ ಪಂಚಾಯತ ಸದಸ್ಯರಾದ ಶ್ರೀಮತಿ ಮಹಾನಂದಾ ಬಸಲಿಂಗ ಮರೀಕಟ್ಟಿ, ಮಾರುತಿಜಂಗಳಿ, ಸಾಗರ ಕುರಂಗಿ,ಬಾಳು ಕುರಂಗಿ, ಅನ್ನಪೂರ್ಣ ಬುರಾಣಿ,ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಪ್ರಕಾಶ ಗೌಡ್ರು ಪಾಟೀಲ ಪ್ರೌಢ ಶಾಲಾ ಎಸ್ ಡಿ ಎಮ್ ಸಿ ಉಪಾಧ್ಯಕ್ಷ ಬಸವರಾಜ ಥೋರಲಿ, ಹಾಗೂ ಸದಸ್ಯರು, ಕನ್ನಡ ಶಾಲೆ ಎಸ್ ಡಿ ಎಮ್ ಸಿ ಅಧ್ಯಕ್ಷ ಶಂಕರ ಅಂಬೋಜಿ ಹಾಗೂ ಸದಸ್ಯರು, ಹಿರಿಯರಾದ ಯಲ್ಲಪ್ಪ ಥೋರಲಿ,ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಶಂಕರ ಕೊಟ್ರಶೆಟ್ಟಿ ಹಾಗೂ ಸಹ ಶಿಕ್ಷಕರು, ಕನ್ನಡ ಶಾಲೆ ಮುಖ್ಯೋಪಾಧ್ಯಾಯರಾದ ಬಸವರಾಜ ಸುಣಗಾರ ಸೇರಿದಂತೆ ಹಲವಾರು ಗಣ್ಯರು, ವಿವಿಧ ಶಾಲೆಗಳ ಶಿಕ್ಷಕರು ಗ್ರಾಮಸ್ಥರು ಉಪಸ್ಥಿತರಿದ್ದರು.

Latest News

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು – ಡಾ. ಎಚ್ ಸಿ ಎಮ್

   ಮೈಸೂರು: ಇಂದಿನ ಮಕ್ಕಳು ನಾಳೆಯ ನಾಗರಿಕರು. ಆದ್ದರಿಂದ ಗುಣಮಟ್ಟದ ಶಿಕ್ಷಣದ ಮೂಲಕ ಅವರನ್ನು ಉನ್ನತ ವ್ಯಕ್ತಿತ್ವಗಳಾಗಿ ರೂಪಿಸುವ ಹೊಣೆ ಶಿಕ್ಷಕರ ಮೇಲಿದೆ ಎಂದು ಮೈಸೂರು...

More Articles Like This

error: Content is protected !!
Join WhatsApp Group