spot_img
spot_img

ಕಾರಂಜಾ ಸಂತ್ರಸ್ತರಿಂದ ಆತ್ಮಹತ್ಯೆಗೆ ಯತ್ನ

Must Read

spot_img
- Advertisement -

ಬೀದರ – ಕಾರಂಜಾ ಪರಿಹಾರಕ್ಕಾಗಿ ಬೀದರ ಉಸ್ತುವಾರಿ ಸಚಿವರ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ರೈತರು ಒಂದು ಹಂತದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಗೆ ಪ್ರಯತ್ನಿಸಿದ ಘಟನೆ ನಡೆದಿದ್ದು ವಿಷ ಸೇವಿಸಿದ ಮೂವರು ರೈತರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಇದರಿಂದ ಕಾರಂಜಾ ಸಂತ್ರಸ್ತರ ಹೋರಾಟ ತೀವ್ರ ಹೋರಾಟ ಪಡೆದಂತಾಗಿದೆ. ಈ ಮೊದಲು ಕಾರಂಜಾ ಹೋರಾಟ ಆರಂಭಿಸಿದ್ದ ರೈತರು ಪರಿಹಾರಕ್ಕಾಗಿ ೧೫ ದಿನಗಳ ಗಡುವು ನೀಡಿದ್ದರು ಆದರೂ ಸರ್ಕಾರ ಇತ್ತ ಗಮನ ಕೊಡದೇ ಇರುವ ಕಾರಣಕ್ಕೆ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರ ಕಚೇರಿ ಎದುರು ಧರಣಿ ನಡೆಸುತ್ತಿದ್ದ ರೈತರು ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದರು.

ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿದ ಮೂವರು ರೈತರು ಏಕಾಏಕಿ ಅಸ್ವಸ್ಥರಾಗಿದ್ದರಿಂದ ತಕ್ಷಣವೇ ಬೀದರ ಪೊಲೀಸರು ಅವರನ್ನು ಬ್ರಿಮ್ಸ್ ಆಸ್ಪತ್ರೆಗೆ ಸೇರಿಸಿದರು
ಕಾರಂಜಾ ಸಂತ್ರಸ್ತರು ಕಳೆದ ೮೯೦ ದಿನಗಳಿಂದ ಅನಿರ್ಧಿಷ್ಟ ಕಾಲ ಧರಣಿ ನಡೆಸುತ್ತಿದ್ದಾರೆ. ಇನ್ನಾದರೂ ಸರ್ಕಾರ ಕಣ್ಣು ಕಿವಿ ತೆರೆದು ಕಾರಂಜಾ ಸಂತ್ರಸ್ತರ ನೆರವಿಗೆ ಬರುವುದೋ ಕಾದು ನೋಡಬೇಕು.

- Advertisement -

ವರದಿ : ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group