Homeಸುದ್ದಿಗಳುಚುನಾವಣೆಯಲ್ಲಿ ಸೋತಿದ್ದರೂ ವಾಗ್ದಾನ ಈಡೇರಿಸುತ್ತೇನೆ - ಅಶೋಕ ಮನಗೂಳಿ

ಚುನಾವಣೆಯಲ್ಲಿ ಸೋತಿದ್ದರೂ ವಾಗ್ದಾನ ಈಡೇರಿಸುತ್ತೇನೆ – ಅಶೋಕ ಮನಗೂಳಿ

ಸಿಂದಗಿ: ಉಪಚುನಾವಣೆಯ ಮತಯಾಚನೆ ಸಂದರ್ಭದಲ್ಲಿ ವಾಗ್ದಾನ ಮಾಡಿದಂತೆ ದೇವಸ್ಥಾನದ ಶಿಖರ ನಿರ್ಮಾಣ ಕಾಮಗಾರಿ ಮಾಡಿಸುವುದು ನನ್ನ ಕರ್ತವ್ಯವಾಗಿದೆ ಚುನಾವಣೆಯಲ್ಲಿ ಸೋತಿರಬಹುದು ಆದರೆ ನಿಮ್ಮ ಮನಸ್ಸಿನಿಂದ ದೂರವಿಲ್ಲ ಆ ಕಾರಣಕ್ಕೆ ಸೋತಿದ್ದೇನೆ ಎಂದು ಎದೆಗುಂದದೆ ನೀಡಿದ ವಾಗ್ದಾನ ಪೂರ್ಣಗೊಳಿಸುವ ಕಾರ್ಯ ಮಾಡಿಯೇ ತೀರುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಹೇಳಿದರು.

ತಾಲೂಕಿನ ಕೊಕಟನೂರ ಗ್ರಾಮದ ಶ್ರೀ ಕೆಂಚಲಿಂಗೇಶ್ವರ ದೇವಸ್ಥಾನದ ಶಿಖರ ನಿರ್ಮಾಣ ಕಾಮಗಾರಿಯ ಅಡಿಗಲ್ಲು ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಪುಂಡಲಿಕ ಪೂಜಾರಿ, ಶಂಕ್ರಯ್ಯ ಮಠ, ರಾಮಣ್ಣ ಗೋವಿಂದ, ಎಸ್.ಕೆ.ಪೂಜಾರಿ ವಕೀಲರು, ನಿಂಗನಗೌಡ ಪ್ರಭುಗೋಳ, ಚಂದ್ರಾಮ ಉಡಚಾಣ, ಶಂಕರ ಗೋಣಿ, ಶರಣೂ ವನಗಳ್ಳಿ, ಜಾಂಗೀರ ಮುಜಾವರ, ಗೌಡಪ್ಪ ಕನ್ನೂರ, ಹೂವಪ್ಪ ಕನ್ನೂರ, ಮುದ್ದಪ್ಪ ದಿಂಡವಾರ, ಕಾಂತಪ್ಪ ಬ್ಯಾಕೋಡ, ಅಣ್ಣಾರಾಯ ಬಮ್ಮನಳ್ಳಿ ಸೇರಿದಂತೆ ಗ್ರಾಮದ ಮುಖಂಡರೂ ಕಾಂಗ್ರೆಸ್ ಯುವ ಕಾರ್ಯಕರ್ತರು ಹಾಜರಿದ್ದರು.

RELATED ARTICLES

Most Popular

error: Content is protected !!
Join WhatsApp Group