ಸಿಂದಗಿ – ಕಲಬುರ್ಗಿ ಮನೆತನ ಸಾಹಿತ್ಯಿಕವಾಗಿ ಈ ನಾಡಿಗೆ ಅನೇಕ ಕೊಡುಗೆಗಳನ್ನು ನೀಡಿದೆ. ನಾಡಿನ ಅನೇಕ ಕಡೆಗಳಲ್ಲಿ ಕಲಬುರ್ಗಿ ಮನೆತನಗಳಿವೆ ಆ ಎಲ್ಲ ಮನೆತನಗಳು ಸೇರಿ ಲಿಂ.ಡಾ.ಎಂ.ಎಂ.ಕಲಬುರ್ಗಿ ಅವರ ಕುಟುಂಬದಿಂದ ವಿವಿಧ ಸಾಮಾಜಿಕ ಸೇವೆ ಮಾಡಲು ಕಲಬುರ್ಗಿ ಫೌಂಡೇಶನ್ ಜ.2 ರಂದು ಉದ್ಘಾಟನೆಗೊಳ್ಳಲಿದೆ ಹಾಗೂ ಅಂದು ಸಿಂದಗಿಯ ಸಾಹಿತಿ ಪಿ.ಮುನಿಕುಮಾರ ಅವರ ಸ್ಮರಣಾರ್ಥ ಶಿವಪ್ಪ ಗವಸಾನಿ ಅವರ ಗ್ರಂಥದಾನಿಗಳಿಂದ ರಚಿತವಾದ ಡಾ.ಎಂ.ಎಂ.ಕಲಬುರ್ಗಿ ಅವರ ವಚನವರ್ಷ ಗ್ರಂಥ ಬಿಡುಗಡೆ ಸಮಾರಂಭವು ಪಟ್ಟಣದ ಊರನ ಹಿರಿಯ ಮಠದಲ್ಲಿ ಸಂಜೆ 5.30 ಗಂಟೆಗೆ ನೆರವೇರಲಿದೆ ಎಂದು ಕಲಬುರ್ಗಿ ಫೌಂಡೇಶನದ ಸಲಹೆಗಾರ ಡಾ.ಎಂ.ಎಂ.ಪಡಶೆಟ್ಟಿ ಹೇಳಿದರು.
ಪಟ್ಟಣದ ಬಸವ ಮಂಟಪದಲ್ಲಿ ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ, ಆರೋಗ್ಯ, ಕನ್ನಡ ಭಾಷೆಯ ಅಭಿವೃದ್ದಿ, ಸಾಹಿತ್ಯ, ಶರಣ ಧರ್ಮದ ಪ್ರಚಾರ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಕ್ಕಳಿಗೆ ಉಚಿತ ಶಿಕ್ಷಣದ ವ್ಯವಸ್ಥೆ, ಹೆಣ್ಣು ಮಕ್ಕಳ ಶಿಕ್ಷಣದ ವ್ಯವಸ್ಥೆ, ವೈದ್ಯಕೀಯ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ಈ ಫೌಂಡೇಶನ ಕಾರ್ಯ ಪ್ರವೃತ್ತವಾಗಲಿದೆ. ಇವೆಲ್ಲವು ಡಾ.ಎಂ.ಎಂ.ಕಲಬುರ್ಗಿ ಅವರ ಕನಸಾಗಿತ್ತು. ಅಂಬಲಿ ಕಂಬಳಿ ನಮ್ಮ ಆಸ್ತಿ ಮಿಕ್ಕಿದೆಲ್ಲ ಜಾಸ್ತಿ ಎಂಬ ಕಲಬುರ್ಗಿ ಅವರ ತತ್ವದ ಮೇಲೆ ನ್ಯೂಜಿಲೇಂಡನಲ್ಲಿರುವ ಅವರ ಅಣ್ಣನ ಮಗನಾದ ಲಿಂಗಪ್ಪ ಕಲಬುರ್ಗಿ ಹಾಗೂ ಅವರ ಧರ್ಮಪತ್ನಿ ದಾಕ್ಷಾಯಣಿಯವರ ಮಾರ್ಗದರ್ಶನದಲ್ಲಿ ಈ ಫೌಂಡೇಶನ್ ಸಮಾಜ ಸೇವೆ ಮಾಡಲಿದೆ ಎಂದ ಅವರು ನಿಜಕ್ಕೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಕ್ಕಳು ಇದ್ದಲ್ಲಿ ಅಥವಾ ತೊಂದರೆಯಲ್ಲಿರುವ ಜನರು ಕಂಡು ಬಂದರೆ ಈ ಫೌಂಡೇಶನನ್ನು ಸಂಪರ್ಕಿಸಿ ಎಂದರು.
ಕಾರ್ಯಕ್ರಮದಲ್ಲಿ ಊರಿನ ಹಿರಿಯ ಮಠದ ಪೂಜ್ಯ ಶ್ರೀ ಶಿವಾನಂದ ಶಿವಾಚಾರ್ಯರು ಸಾನ್ನಿಧ್ಯ ವಹಿಸಿಕೊಳ್ಳಲಿದ್ದಾರೆ. ಶಾಸಕ ರಮೇಶ ಭೂಸನೂರ, ವಿಪ ಸದಸ್ಯ ಅರುಣ ಶಹಾಪೂರ, ಡಾ.ಸಂಗಮೇಶ ಮೇತ್ರಿ, ಪುರಸಭೆಯ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಶಿವಪ್ಪ ಗವಸಾನಿ, ಮಹಾದೇವಿ ಗವಸಾನಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ಡಾ.ಚನ್ನಪ್ಪ ಕಟ್ಟಿ, ಕಲಬುರ್ಗಿ ಫೌಂಡೇಶನದ ಅಧ್ಯಕ್ಷ ಶಿವಲಿಂಗಪ್ಪ ಕಲಬುರ್ಗಿ, ಶಿವಾನಂದ ಕಲಬುರ್ಗಿ, ಶಿವಪ್ಪ ಗವಸಾನಿ, ದುಂಡಪ್ಪ ಕಲಬುರ್ಗಿ, ಜಗದೀಶ ಕಲಬುರ್ಗಿ, ಸಿದ್ದು ಕೋರಳ್ಳಿ(ಸುಂಟಿ) ಸೇರಿದಂತೆ ಅನೇಕರು ಇದ್ದರು.