ಕಾರ್ಖಾನೆಯ ಇಬ್ಬರು ಕಾರ್ಮಿಕರು ಗಂಭೀರ ಗಾಯ
ಬೀದರ: ಬೀದರ ಜಿಲ್ಲೆಯ ಹುಮ್ನಾಬಾದ ಪಟ್ಟಣದ ಕೈಗಾರಿಕ ಪ್ರದೇಶದಲ್ಲಿ ಇರುವ ಹಿಮಾಲಯ ಸ್ಟೀಲ್ ಇಂಡಸ್ಟ್ರಿಯಲ್ ಟೈರ್ ಆಯಿಲ್ ಉತ್ಪಾದನಾ ಘಟಕದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಅನಾಹುತ ಸಂಭವಿಸಿದೆ.
ಅಗ್ನಿ ಅನಾಹುತದಲ್ಲಿ ಇಬ್ಬರು ಕಾರ್ಖಾನೆ ನೌಕರರು ಗಂಭಿರವಾಗಿ ಗಾಯಗೊಂಡಿದ್ದಾರೆ.
ಸುನಿಲ್ ಬಚ್ಚಾರಾಮ, ಸಚಿನ್ ಬಚ್ಚಾರಾಮ ಗಂಭೀರ ಗಾಯಗೊಂಡ ಕಾರ್ಮಿಕರು.
ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ಶಮನಗೊಳಿಸಿದ್ದು ಗಾಯಾಳುಗಳಿಗೆ ಹುಮ್ನಾಬಾದ ದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆ ಗಾಗಿ ಕಲಬುರಗಿಗೆ ಕಳಿಸಲಾಗಿದೆ
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹುಮ್ನಾಬಾದ ಪೋಲಿಸರು ಘಟನೆಯ ಅವಲೋಕನ ಮಾಡುತ್ತಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ