ಗುರ್ಲಾಪೂರ : ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಮಾರುತಿದೇವರ ಓಕಳಿ ಹಾಗೂ ಶ್ರೀ ಬಸವೇಶ್ವರ ರಥೋತ್ಸವವು ದಿ. 13 ರಿಂದ 17 ವರಿಗೆ ಅದ್ದೂರಿಯಾಗಿ ಜರುಗುವದು.
ಗುರುವಾರ ದಿ.13 ರಂದು ಗ್ರಾಮದ ಮಾರುತಿ ದೇವರ ಮುಂದೆ ಇರುವ ಓಕಳಿ ಹೊಂಡಕ್ಕೆ ವಿಶೇಷವಾಗಿ ಪೊಜೆ ಸಲ್ಲಿಸಿ ಓಕಳಿ ಹೊಂಡ ತಗೆದು ಸಣ್ಣಓಕಳಿ ಆಡುವರು,
ಶುಕ್ರವಾರಂದು ಗ್ರಾಮದ ಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಮಾಡಿ ಉಡಿ ತುಂಬಿ ಮಂಗಳಾರತಿ ಮಾಡುವರು ಸಂಜೆ ಗ್ರಾಮದಲ್ಲಿ ಓಕಳಿ ಆಟವಾಡುವರು, ಶನಿವಾರರಂದು ಗ್ರಾಮದ ಮಾರುತಿ ದೇವರಿಗೆ ವಿಶೇಷವಾಗಿ ಪೂಜೆಮಾಡಿ ಬಸವೇಶವರ ರಥದಲ್ಲಿ ಗೌಡರ ಮನೆಯಿಂದ ಕಳಸಕ್ಕೆ ಪೂಜೆ ಮಾಡಿ ಶ್ರೀ ಬಸವೇಶ್ವರ ರಥದಲ್ಲಿ ಬಸವೇಶ್ವರ ಮೂರ್ತಿ ಹಾಗು ಕಳಸವನ್ನು ಕೂಡಿಸುವರು ನಂತರ. ಯುವಕರು ಸೇರಿ ಕಡೆ ಓಕಳಿ ಆಡುವರು
ತದನಂತರ ಮಾರುತಿದೇವರ ಪಲಕ್ಕಿಯೊಂದಿಗೆ ಓಕಳಿ ಹೊಂಡಕ್ಕೆ ಪ್ರದಷಣೆ ಮಾಡಿ ಶ್ರೀ ಬಸವೇಶ್ವರರ ಗದ್ದುಗೆಯವರೆಗೆ ಹೋಗಿ ಮಹಾಮಂಗಳಾರತಿ ಮಾಡಿಪಲಕ್ಕಿಉತ್ಸವ ಮರಳಿ ಮಾರುತಿ ದೇವಸ್ಥಾನಕ್ಕೆ ಬರುತ್ತದೆ.
ಸೋಮವಾರ ದಿ.17 ರಂದು ಶ್ರೀ ಬಸವೇಶ್ವರರ ಗದ್ದುಗೆಗೆ ಮಹಾ ಅಭಿಷೇಕ ಜರುಗುವದು. ಸಂಜೆ 5 ಗಂಟೆಗೆ ಶ್ರೀ ಬಸವೇಶ್ವರ ದೇವಸ್ಥಾನದಿಂದ ರಥೋತ್ಸವವು ಮಾರುತಿ ದೇವಸ್ಥಾನದವರೆಗೆ ಜರುಗಿ ಮಹಾ ಮಂಗಳಾರುತಿ ಸಲ್ಲಿಸಿ ಮರಳಿ ಶ್ರೀ ಬಸವೇಶ್ವರ ಗದ್ದುಗೆಗೆ ತಲಪುವುದು ಈ ಸಮಯದಲ್ಲಿ ಸುಮಂಗಲಿಯರ ಆರತಿ ಸಕಲ ವಾದ್ಯ ಮೇಳ ಕುದರಿಕುಣಿತ ಹಾಗೂ ರೂಪಕಗಳು ಪ್ರದರ್ಶನ ಜರಗುವದು. ಎಂದು ಜಾತ್ರಾ ಕಮೀಟಿಯವರು ತಿಳಿಸಿರುತ್ತಾರೆ.