ಸಿಂದಗಿ: ಮಹಾಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜೀವನವೇ ನಮ್ಮೆಲ್ಲರಿಗೂ ದಾರಿದೀಪವಾಗಿದೆ ಕಾರಣ ಅವರ ಜೀವನದ ತತ್ವಾರ್ದಶಗಳನ್ನು ನಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ತಹಶೀಲ್ದಾರ ನಿಂಗಣ್ಣ ಬಿರಾದಾರ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಮಹಾಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜಯಂತಿ ನಿಮಿತ್ತ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ರಡ್ಡಿ ಸಮಾಜದ ಮುಖಂಡರಾದ ಬಿ. ಎಂ. ಬಿರಾದಾರ, ಶಿರಸ್ತೆದಾರರಾದ ಜಿ.ಎಸ್.ರೋಡಗಿ, ಸುರೇಶ ಮ್ಯಾಗೇರಿ, ಕಂದಾಯ ನಿರೀಕ್ಷಕರಾದ ಐ.ಎಂ.ಮಕಾನದಾರ, ಎಂ.ಬಿ.ಅತ್ತಾರ, ಹಾಗೂ ಕೀರ್ತಿ ಅಗ್ನಿಹೋತ್ರಿ, ರಮೇಶ ತಳವಾರ, ರಾಮಪ್ಪ ರಾಂಪೂರ ಸೇರಿದಂತೆ ಹಲವರಿದ್ದರು.