ಬೆಳಗಾವಿ – ಲಿಂಗಾಯತ ಸಂಘಟನೆ ಡಾ. ಡಾ ಹಳಕಟ್ಟಿ ಭವನ, ಮಹಾಂತೇಶ್ ನಗರ್ ಬೆಳಗಾವಿಯಲ್ಲಿ ದಿ. 02 ರಂದು ವಾರದ ಪ್ರಾರ್ಥನೆ ಉಪನ್ಯಾಸ ಜರುಗಿತು
ಪ್ರಾರಂಭದಲ್ಲಿ ಶರಣ ಶರಣೆಯರಿಂದ ಪ್ರಾರ್ಥನೆ ಬಿ ಪಿ ಜವನಿ ,ಚವಲಗಿ ,ವಿ ಕೆ ಪಾಟೀಲ್, ಸುವರ್ಣ ಗುಡಸ ,ಆರ್ ಎಸ್ ಚಾಪಗಾವಿ , ಮತ್ತು ಶರಣ ಶರಣೆಯರಿಂದ ವಚನ ವಿಶ್ಲೇಷಣೆ ಜರಗಿದವು
ಅತಿಥಿಗಳಾಗಿ ಲಕ್ಷ್ಮಿಕಾಂತ್ ಗುರವ ಆಗಮಿಸಿದ್ದರು ವಿರುಪಾಕ್ಷಿ ದೊಡಮನಿ ಉಪನ್ಯಾಸ ನೀಡಿದರು ಮಕ್ಕಳಿಗೆ ಸಂಸ್ಕಾರ ಮುಖ್ಯ ಉತ್ತಮ ಮಾರ್ಗದಲ್ಲಿ ಸಾಗಿಸುವುದು ಮಠ ಮಾನ್ಯಗಳ ಪಾತ್ರ ಮುಖ್ಯವಾದದ್ದು ಸೇವಾ ಮನೋಭಾವನೆ ಇರಬೇಕು ಮೊದಲು ಗುರುಕುಲಗಳಿದ್ದವು ಮೊದಲು ಮಠಮಾನ್ಯಗಳು ವ್ಯಾಜ್ಯ ಬಗೆಹರಿಸುತ್ತಿದ್ದವು ಈಗ ನ್ಯಾಯಾಲಯಗಳೆ ಬಗೆಹರಿಸುವವು ಎಂದರು
ಅಧ್ಯಕ್ಷತೆಯನ್ನು ಈರಣ್ಣ ದೆಯನ್ನವರ್ ವಹಿಸಿದ್ದರು ಲಕ್ಷ್ಮಣ್ ಕುಂಬಾರ್ ದಾಸೋಹ ಸೇವೆ ನೀಡಿದರು ಶೇಖರ್ ವಾಲಿಇಟಗಿ, ಸುನಿಲ್ ಸಾನಿಕೊಪ್ಪ, ಬಾಳಗೌಡ ದೊಡಬಂಗಿ, ಸದಾಶಿವ ದೇವರಮನಿ ,ತಿಗಡಿ, ಮರಲಿಂಗನ್ನವರ,ಬಸವರಾಜ ಛಟ್ಟರ.ಎಂ ವೈ ಮೆಣಸಿನಕಾಯಿ, ಶಶಿಭೂಷಣ ಪಾಟೀಲ ,ಶ್ರೀದೇವಿ ನರಗುಂದ,ಬಸವರಾಜ ಕರಡಿಮಠ, ಅನೇಕ ಶರಣ ಶರಣೆಯರು ಉಪಸ್ಥಿತರಿದ್ದರು ಸುರೇಶ ನರಗುಂದ ನಿರೂಪಿಸಿ ವಂದಿಸಿದರು