ಆಶಾಕಿರಣ
ಅನ್ನ ಅರಿವೆಯ ಜೊತೆಗೆ
ಅರಿವಿನ ಅರಿವು ಮೂಡಿಸಿದವಳು
ಹೆಣ್ಣು ಮಕ್ಕಳ ಎದೆಯಲಿ
ಅಕ್ಷರದ ಬೀಜ ಬಿತ್ತಿ
ನಿಜ ಬದುಕಿನ ಅರ್ಥ ತಿಳಿಸಿದವಳು
ಕುರುಡು ಸಂಪ್ರದಾಯದ
ರೀತಿನೀತಿಗಳಿಗೆ ಕೊಕ್ಕು ಹಾಕಿ
ಹಕ್ಕಿಗಾಗಿ ಧ್ವನಿಯತ್ತಿದವಳು
ಶೋಷಿತ ಅಬಲೆಯರಿಗೆ
ಅವ್ವಳಾಗಿ ಮಡಿಲಲ್ಲಿ
ಆಶ್ರಯ ಕೊಟ್ಟವಳು
ಅವಮಾನ ಅಡೆತಡೆಗಳನೆಲ್ಲ
ಅಡಿಪಾಯಕೆ ಹಾಕಿ
ಅಕ್ಷರದ ದೇಗುಲವ ಕಟ್ಟಿದವಳು
ಜ್ಯೋತಿಗೆ ಬತ್ತಿಯಾಗಿ
ಸುಡುತ ನೋವನುಂಡರು
ಅಜ್ಞಾನ ತಿಮಿರವನೋಡಿಸಿದವಳು
ವ್ಯವಸ್ಥೆಯ ಜೊತೆ ಹೋರಾಡಿದ
ಸ್ತ್ರೀ ಕುಲಕೆ ಶಿಕ್ಷಣಕೊಡುವ ಪಣತೊಟ್ಟು ಗೆದ್ದವಳು
ಸಾವಿರದ ಶರಣು ನಿನಗೆ ಸಾವಿತ್ರಿ ಆಧುನಿಕ ಶಿಕ್ಷಣದ ಮೊದಲ ಗುರುಮಾತೆಯಾದವಳು
ನೀನಿಟ್ಟ ಬೆಳಕಿಂದು ಬೆರಗುಮಡಿಸುತಿದೆ
ಮನೆಮನೆಯಲಿ ದೀಪಗಳ ಸಾಲು ನಗುತಲಿದೆ
ಅಂಗಳದಿಂದ ಬಾನಂಗಳದವರೆಗೂ
ಬೆಳಕು ಚೆಲ್ಲುತಾ ನಡೆದಿದೆ ಭಾರತದ ಸ್ತ್ರೀ ಕುಲ
ಡಾ. ನಿರ್ಮಲಾ ಬಟ್ಟಲ ಬೆಳಗಾವಿ