Homeಸುದ್ದಿಗಳುಗ್ರಾಮ ಒನ್‌ ನಾಗರಿಕರ ಸೇವಾ ಕೇಂದ್ರಕ್ಕೆ ಚಾಲನೆ ನೀಡಿದ ಸಚಿವ‌ ಪ್ರಭು ಚವ್ಹಾಣ

ಗ್ರಾಮ ಒನ್‌ ನಾಗರಿಕರ ಸೇವಾ ಕೇಂದ್ರಕ್ಕೆ ಚಾಲನೆ ನೀಡಿದ ಸಚಿವ‌ ಪ್ರಭು ಚವ್ಹಾಣ

ಬೀದರ: ನಗರದ ಹೊರವಲಯದಲ್ಲಿ ಬರುವ ಮರಕಲ್ ಗ್ರಾಮ ಪಂಚಾಯತ ಕಚೇರಿಯಲ್ಲಿ ರಾಜ್ಯ ಸರ್ಕಾರದಿಂದ ಆರಂಭಿಸಲಾದ ಗ್ರಾಮ ಒನ್ ನಾಗರಿಕ ಸೇವಾಕೇಂದ್ರಕ್ಕೆ ಪಶು ಸಂಗೋಪನಾ ಮತ್ತು ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ ಅವರು ಶಾಸಕರಾದ ರಹಿಂ ಖಾನ್‌ ಅವರ ಸಮ್ಮುಖದಲ್ಲಿ ಚಾಲನೆ ನೀಡಿದರು.

ನಂತರ ಮಾತನಾಡಿ, ಇನ್ನು ಮುಂದೆ ನಮ್ಮ ಗ್ರಾಮೀಣ ಭಾಗದ ನಾಗರಿಕರು ತಮ್ಮ ಯಾವುದೆ ಸರ್ಕಾರದ ಕೆಲಸಕ್ಕೆ ‌ ತಾಲೂಕ ಮತ್ತು ಜಿಲ್ಲಾ ಕೇಂದ್ರಕ್ಕೆ ಹೋಗುವಂತಿಲ್ಲ ತಮಗೆ ಬೇಕಾದ ಸರ್ಕಾರದ ಎಲ್ಲಾ ಸೌಲಭ್ಯಗಳು ಗ್ರಾಮ ಒನ್ ‌ಕೇಂದ್ರದಲ್ಲೆ ಸಿಗುತ್ತದೆ ಎಂದು ಹೇಳಿ ಜನರ ಸೇವೆಯೆ ನಮ್ಮ ಸರ್ಕಾರದ‌ ಮಖ್ಯ ಉದ್ದೇಶ‌ವಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಗಳಾದ ಆರ್. ರಾಮಚಂದ್ರನ್ ಮರಕಲ‌ ಗ್ರಾಮ ಪಂಚಾಯತ‌ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷ ಈ‌ ಸಂದರ್ಭದಲ್ಲಿ ಉಪಸ್ಥಿತರಿದ್ದರು

RELATED ARTICLES

Most Popular

error: Content is protected !!
Join WhatsApp Group