ಮುನವಳ್ಳಿ: ಪಟ್ಟಣದ ಯುವ ಉತ್ಸಾಹಿ ಉಪನ್ಯಾಸಕ ಡಾ. ಅಜೇಯ ಅಬ್ಬಾರರಿಗೆ ಬಸವಂತ ನಾಗು ಶಿಂಗಾಡೆ ಚಾರಿಟೇಬಲ್ ಟ್ರಸ್ಟ್, ಬೆಡಕಿಹಾಳ ಇವರು ನೀಡುವ ರಾಷ್ಟ್ರೀಯ ಪ್ರೇರಣಾ ಗೌರವ ಪ್ರಶಸ್ತಿ – ೨೦೨೨ ದೊರೆತಿದೆ. ಇತ್ತೀಚೆಗೆ ಬೆಳಗಾವಿಯ ನೀಯಾ ಹೋಟೆಲ್ ನಲ್ಲಿ ಜರುಗಿದ ಕಾರ್ಯ ಕ್ರಮದಲ್ಲಿ ಈ ಪ್ರಶಸ್ತಿ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಡಾ.ಎನ್ ಎಂ ಸಾಲಿ ಅಧ್ಯಕ್ಷತೆ ವಹಿಸಿದ್ದರು.
ಡಾ. ಶರಣು ಮುಷ್ಟಿಗಿರಿ, ಹಾಗೂ ಸಂಸ್ಥಾಪಕ ಅದ್ಯಕ್ಷರಾದ ಡಾ. ವಿಕ್ರಮ್ ಬಸವಂತ ಶಿಂಗಾಡೆ ಉಪಸ್ಥಿತರಿದ್ದರು.
ಡಾ. ಅಜೇಯ್ ಅಬ್ಬಾರ ಸದ್ಯ ತಾಳಿಕೋಟಿಯ ಎಸ್.ಕೆ.ಕಲಾ,ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವರು.
ಅಷ್ಟೇ ಅಲ್ಲ ಕರ್ನಾಟಕ ರಾಜ್ಯ ಅನುದಾನಿತ ಕಾಲೇಜು ಬೋಧಕರ ಸಂಘದ ಉಪಾಧ್ಯಕ್ಷರಾಗಿ ಕೂಡ ಕಾರ್ಯನಿರ್ವಹಿಸುತ್ತಿರುವರು. ಇವರ ಈ ಸಾಧನೆಯನ್ನು ಮುನವಳ್ಳಿಯ ಸೋಮಶೇಖರ ಮಠದ ಪೂಜ್ಯರಾದ ಶ್ರೀ ಮುರುಘೇಂದ್ರ ಸ್ವಾಮಿಗಳು. ಸವದತ್ತಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ವೈ.ಎಂ.ಯಾಕೊಳ್ಳಿ. ಕರ್ನಾಟಕ ಸಾಂಸ್ಕೃತಿಕ ಸಂಘ ಸವದತ್ತಿ ತಾಲೂಕ ಘಟಕದ ಅಧ್ಯಕ್ಷರಾದ ಅನುರಾಧ ಬೆಟಗೇರಿ. ಶಿಕ್ಷಕರಾದ ವೀರಣ್ಣ ಕೊಳಕಿ.ಬಸನಗೌಡ ಹುಲಿಗೊಪ್ಪ, ವೈ.ಬಿ.ಕಡಕೋಳ, ಜಿ,ಪಿ.ಪತ್ತಾರ, ಎ.ಎ.ಅಣ್ಣೀಗೇರಿ, ಎಂ.ಬಿ.ಮಲಗೌಡರ, ಆರ್.ವೈ.ಅಡಿಭಟ್ಟಿ, ಸ್ನೇಹಜೀವಿ ಬಳಗದ ಸುಧೀರ ವಾಘೇರಿ, ಶೀವೂ ಕಾಟೆ, ಎಸ್.ಪಿ.ಜೆ.ಜಿ.ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಅನ್ನಪೂರ್ಣ ಲಂಬೂನವರ. ಅನ್ನದಾನೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಉಪನ್ಯಾಸಕರು. ಅಭಿನಂದಿಸಿದ್ದಾರೆ.
ಡಾ.ಅಜೇಯ ಅಬ್ಬಾರ ಕಿರು ಪರಿಚಯ:
ಮೂಲತಃ ಮುನವಳ್ಳಿಯವರು. ಇವರ ತಂದೆ ಅಪ್ಪಣ್ಣ ತಾಯಿ ಪ್ರೇಮಾ. ಇವರ ತಂದೆ ಮುನವಳ್ಳಿಯ ಹಿರಿಯ ರಾಜಕಾರಣಿಗಳಲ್ಲೊಬ್ಬರು. ಜೊತೆಗೆ ಎಸ್.ಪಿ.ಜೆ.ಜಿ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅಪ್ಪಣ್ಣ ಪ್ರೇಮಾ ದಂಪತಿಗಳಿಗೆ ಮೂರು ಜನ ಗಂಡು ಮಕ್ಕಳು.ಡಾ.ಅಜೇಯ ಜನಿಸಿದ್ದು ೧-೧೦-೧೯೮೨ ರಲ್ಲಿ. ಹಿರಿಯವರಾದ ಅಮೀತ್ ಎಂ.ಈಡಿ ವ್ಯಾಸಂಗ ಪೂರೈಸಿ ಮುನವಳ್ಳಿಯ ಜೆ. ಎಸ್. ಪಿ ಯ ಬಿ. ಈಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದರೆ.ಕೊನೆಯವನು ಅರುಣ್ ಪದವೀಧರ ರಾಗಿದ್ದು ಸ್ಥಳೀಯ ರೇಣುಕಾ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವನು.
ಡಾ.ಅಜೇಯ ಅಬ್ಬಾರ ಸದ್ಯ ತಾಳಿಕೋಟೆಯ ಎಸ್.ಕೆ.ಕಲಾ ಹಾಗೂ ವಾಣಿಜ್ಯ ಮಹಾಇದ್ಯಾಲಯದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವರು.
ಶಿಕ್ಷಣ:
ಡಾ.ಅಜೇಯ ಅಬ್ಬಾರ ಪ್ರಾಥಮಿಕ ಶಿಕ್ಷಣದ ಆರಂಭವು ೧ ನೇ ತರಗತಿಯಿಂದ ೪ ನೇ ತರಗತಿಯವರೆಗೆ ಧಾರವಾಡದ ಕೆ.ಇ.ಬೋರ್ಡ ಶಾಲೆಯಲ್ಲಿ ಜರುಗಿತು. ನಂತರ ಮುನವಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಮಾದರಿ ಶಾಲೆಯಲ್ಲಿ ೫ ರಿಂದ ೭ ನೇತರಗತಿ.ನಂತರ ಎಸ್.ಪಿ.ಜೆ.ಜಿ.ಪ್ರೌಢಶಾಲೆಯಲ್ಲಿ ೮ ರಿಂದ ೧೦ ನೇ ತರಗತಿ. ಜೆ. ಎಸ್. ಪಿ. ಪದವಿ ಪೂರ್ವ ಮಹಾ ವಿದ್ಯಾಲಯದಲ್ಲಿ ಕಲಾ ವಿಭಾಗದಲ್ಲಿ ಪಿ.ಯು.ಸಿ. ಇದೇ ಸಂಸ್ಥೆಯಲ್ಲಿಯೇ ಅಜ್ಜಪ್ಪ ಗಡಮಿ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ.ಇತಿಹಾಸ.ಸಮಾಜಶಾಸ್ತ್ರ ವಿಷಯಗಳಲ್ಲಿ ಪದವಿ ಶಿಕ್ಷಣ ಪೂರೈಸಿ. ರಾಜ್ಯ ಶಾಸ್ತ್ರ ವಿಷಯದಲ್ಲಿ ಎಂ.ಎ. ಶಿಕ್ಷಣವನ್ನು ನಿಯಮಿತ ವಿದ್ಯಾರ್ಥಿಯಾಗಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪೂರೈಸಿದರು. ನಂತರ ಡಾ.ಜಿ.ಬಿ.ನಂದನ್ ಮಾರ್ಗದರ್ಶನದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತಿಯ ಕಾರ್ಯ ವೈಖರಿ ಒಂದು ಅಧ್ಯಯನ ವಿಷಯವಾಗಿ ಸಂಶೋಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದರು.
ಉಪನ್ಯಾಸಕರಾಗಿ ಸೇವೆ:
ಡಾ.ಅಜೇಯ ಅಬ್ಬಾರ ತಮ್ಮ ಆರಂಭಿಕ ಸೇವೆಯನ್ನು ಅಜ್ಜಪ್ಪ ಗಡಮಿ ಮಹಾವಿದ್ಯಾಲಯದಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ರಾಜ್ಯಶಾಸ್ತ್ರ ವಿಷಯವನ್ನು ೩ ವರ್ಷಗಳ ಕಾಲ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಬೋಧಿಸಿದರು. ನಂತರ ಮುನವಳ್ಳಿಯ ಚನ್ನಬಸವ ಮಹಾಸ್ವಾಮೀಜಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಮೂರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಇವರಿಗೆ ತಾಳಿಕೋಟಿಯ ಎಸ್.ಕೆ.ಕಲಾ,ವಾಣಿಜ್ಯ & ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ದೊರಕಿತು. ಸದ್ಯ ಅಲ್ಲಿಯೇ ಸೇವೆ ಸಲ್ಲಿಸುತ್ತಿರುವ ಇವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ದೊರಕಿರುವುದು ಸಂತಸದ ಸಂಗತಿ.
ಕೌಟುಂಬಿಕ ಬದುಕು:
ಇವರದು ಚಿಕ್ಕ ಚೊಕ್ಕ ಸಂಸಾರ.ಪತ್ನಿ ರಶ್ಮಿ ಕೂಡ ಪದವೀಧರೆ ಹಾಗೂ ಡಿ. ಇಡಿ ವ್ಯಾಸಂಗ ಪಡೆದಿರುವ ಮನೆಯೊಡತಿಯಾಗಿ ಪತಿಯ ಸೇವೆಯ ಜೊತೆಗೆ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಪ್ರತಿಭಾವಂತೆ. ಇಬ್ಬರು ಪುತ್ರರು ಆರ್ಯನ್ ಮತ್ತು ಅಪ್ಪಣ್ಣ. ಇವರ ತಂದೆಯ ನಿಧನದ ಒಂದು ತಿಂಗಳ ನಂತರ ಜನಿಸಿದ ಪುತ್ರನಿಗೆ ತಂದೆಯ ಸ್ಮರಣೆಯಲ್ಲಿ ಅಪ್ಪಣ್ಣ ಎಂದು ನಾಮಕರಣ ಮಾಡಿರುವುದನ್ನು ನೆನೆಯುತ್ತ ಭಾವುಕರಾಗುವ ಅಜೇಯ ಕಾಲೇಜು ದಿನಗಳಲ್ಲಿ ಹೋರಾಟದ ಮನೋಭಾವವುಳ್ಳ ಯುವಕ.ಬಹಳ ಸ್ನೇಹ ಜೀವಿ ಕೂಡ. ಯುವಕರ ಸಂಘಟನೆಯೇ ಇವರ ಜೊತೆಗಿರುತ್ತಿತ್ತು.
ವಿವಿಧ ಸಂಘಟನೆಗಳ ಪದಾಧಿಕಾರಿ:
ಇವರು ವೃತ್ತಿಯ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರಾಗಿ ಮುನವಳ್ಳಿ ಹೋಬಳಿ ಘಟಕದಲ್ಲಿ ಕೂಡ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅನುದಾನಿತ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕ ವೃಂದದ ಸಂಘಟನೆಯಲ್ಲಿ ಉಪಾಧ್ಯಕ್ಷರಾಗಿ.ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘಟನೆಯ ಗೌರವ ಸದಸ್ಯರಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಉಪನ್ಯಾಸಕರ ಒಕ್ಕೂಟದ ಸದಸ್ಯರಾಗಿಯೂ ಕೂಡ ತಮ್ಮ ವೃತ್ತಿ ಬದುಕಿನೊಂದಿಗೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸದಸ್ಯತ್ವವನ್ನು ಹೊಂದುವ ಮೂಲಕ ಕರ್ನಾಟಕ ರಾಜ್ಯ ಅನುದಾನಿತ ಕಾಲೇಜು ಬೋಧಕರ ಸಂಘದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವರು. ಇವರ ಸೇವೆಗೆ ಈಗ ಪ್ರಶಸ್ತಿಯ ಗರಿ ಮೂಡಿರುವುದು ಅಭಿನಂದನಾರ್ಯ.
ಡಾ.ಅಜೇಯ ಅಬ್ಬಾರ ಅವರಿಗೆ ಇನ್ನೂ ಹೆಚ್ಚು ಪ್ರಶಸ್ತಿ ಗೌರವಗಳು ಲಭಿಸಲಿ ಎಂದು ಹಾರೈಸುವೆನು. ಅವರ ಸಂಪರ್ಕ ಸಂಖ್ಯೆ. ೯೪೮೨೪೬೦೩೯೨
ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
೯೪೪೯೫೧೮೪೦೦ ೮೯೭೧೧೧೭೪೪೨