ಮಿನಿ ಕವನ: ಹೊಯ್ದಾಟ

Must Read

ಹೊಯ್ದಾಟ

ಬತ್ತಿಯ ಭಾವನೆ
ತೈಲವನು ನಾನು ಹನಿಹನಿಯಾಗಿ ನುಂಗುತ್ತಿದ್ದೇನೆಂಬುದು.
ತೈಲದ ಭಾವನೆ
ಬತ್ತಿಯನ್ನು ಸದ್ದಿಲ್ಲದೆ ಇಂಚಿಂಚು ಸುಟ್ಟು ಬೂದಿ ಮಾಡುತ್ತಿದ್ದೇನೆ ಎಂಬುದು.
ಇವೆರಡರ ನಡುವೆ ಯಾರಿಗೂ
ಕಿಂಚಿತ್ತೂ ಗೊತ್ತಾಗದಂತೆ
ಗೀರಿದ ಕಡ್ಡಿಯ ಬೆಂಕಿ
ದೀಪವಾಗಿ ಶಾಂತವಾಗಿ
ಬೆಳಕಾಗಿ ರಾರಾಜಿಸುತ್ತಿತ್ತು
ಜಗದ ಬೆಳಕು ನಾನೆ ಎಂದು.


ಉಮಾದೇವಿ.ಯು. ತೋಟಗಿ
ಸ. ಶಿ. ಸ. ಕ. ಹಿ. ಪ್ರಾ. ಶಾ. ರಾಮಾಪುರ
ತಾ. ಸವದತ್ತಿ. ಜಿ. ಬೆಳಗಾವಿ

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group