ಹೊಟೇಲ್ ಮೇಲೆ ಅಬಕಾರಿ ದಾಳಿ

Must Read

ಸಿಂದಗಿ: ಪಟ್ಟಣದ ಬೈಪಾಸ ರಸ್ತೆಯ ಗೋಲಗೇರಿ ಕ್ರಾಸನಲ್ಲಿರುವ ಶಿವಾನಿ ಹೋಟೇಲ ಮೇಲೆ ಅಬಕಾರಿ ದಾಳಿ ಮಾಡಿ ಒಟ್ಟು-6.120 ಲೀ ಮದ್ಯ ಹಾಗೂ ಒಟ್ಟು-21.490 ಲೀ ಬೀಯರ ಜಪ್ತಿ ಪಡಿಸಿಕೊಂಡು ಆರೋಪಿತನನ್ನು ದಸ್ತಗಿರಿ ಮಾಡಿ ಅಬಕಾರಿ ನಿರೀಕ್ಷಕಿ ಆರತಿ ಖೈನೂರ ರವರು ಪ್ರಕರಣವನ್ನು ದಾಖಲಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ.

ತಾಲೂಕ ದಂಡಾಧಿಕಾರಿ ನಿಂಗಣ್ಣ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ರಾಜೇಶ್ವರಿ ತುಂಗಳ, ಕಂದಾಯ ನಿರೀಕ್ಷಕ ಇಮಾಮಕಾಶೀಮ.ಎ.ಮಕಾನದಾರ ಹಾಗೂ ಆಹಾರ ಇಲಾಖೆಯ ಶಿರಸ್ತೇದಾರ ರವಿಕುಮಾರ ವಿಠ್ಠಲ ರಾಠೋಡ ಹಾಗೂ ಅಬಕಾರಿ ನಿರೀಕ್ಷಕಿ ಆರತಿ ಖೈನೂರ ಅವರು ಕೂಡಿಕೊಂಡು  ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಈ ದಾಳಿಯಲ್ಲಿ ಸಿಬ್ಬಂದಿಯಾದ ಎಮ್.ಜೆ.ಮೊಕಾಶಿ ಅಬಕಾರಿ ಪೇದೆ ಹಾಗೂ ಪೋಲಿಸ್ ಸಿಬ್ಬಂದಿಗಳಾದ ಭಗವಂತ್ರಾಯ ಮುಳಸಾವಳಗಿ ಪೋಲಿಸ್ ಪೇದೆ, ಮೈಬೂಬ ಮುಲ್ಲಾ ಪೋಲಿಸ್ ಪೇದೆ ರವರು ಹಾಜರಿದ್ದರು.

Latest News

ಸ್ವಾತಂತ್ರ ಹೋರಾಟಗಾರ, ಹೈ. ಕ. ವಿಮೋಚನಾ ರೂವಾರಿ ಚಂದ್ರಶೇಖರ ಪಾಟೀಲ ಮಹಾಗಾಂವ

ಚಂದ್ರಶೇಖರ ಸಂಗಶೆಟ್ಟಿ ಪಾಟೀಲ , ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದ ಶಾಸಕಾಂಗ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ ಹೋರಾಟಗಾರ ಮತ್ತು ರಾಜಕಾರಣಿ. ಸ್ವಾತಂತ್ರ ಹೋರಾಟಗಾರ ಹೈದ್ರಾಬಾದ...

More Articles Like This

error: Content is protected !!
Join WhatsApp Group