Homeಸುದ್ದಿಗಳುಪಶುಸಂಗೋಪನೆ ಇಲಾಖೆಯಲ್ಲಿ 200 ಕೋಟಿ ರೂ. ಹಗರಣ ; ಆರೋಪ

ಪಶುಸಂಗೋಪನೆ ಇಲಾಖೆಯಲ್ಲಿ 200 ಕೋಟಿ ರೂ. ಹಗರಣ ; ಆರೋಪ

ಬೀದರ – ಸಂಚಾರಿ ಪಶು ಚಿಕಿತ್ಸಾ ಅಂಬುಲೆನ್ಸ ಟೆಂಡರ್ ನಲ್ಲಿ ರೂ. 200 ಕೋಟಿ ಹಗರಣ ನಡೆದಿದೆ ಎಂದು ಬಿಜೆಪಿ ಮುಖಂಡ ರವಿ ಸ್ವಾಮಿ ಆರೋಪಿಸಿದ್ದಾರೆ.

ಔರಾದ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ರವಿ, ಎಡುಸ್ ಪಾರ್ಕ್ ಕಂಪನಿಗೆ ಟೆಂಡರ್ ನೀಡಿದ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಅವರ ಧೋರಣೆಯನ್ನು ಕಟುವಾಗಿ ಟೀಕಿಸಿದ್ದಾರಲ್ಲದೆ ಇದರಲ್ಲಿ ಇನ್ನೂರು ಕೋಟಿ ರೂ. ಹಗರಣ ನಡೆದಿದೆ ಎಂದು ಆರೋಪಿಸಿದ್ದಾರೆ.

ಅನುಭವ ಇಲ್ಲದೇ ಕಂಪನಿಗೆ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಟೆಂಡರ್ ನೀಡಿದ್ದಾರೆ ಎಂದ ಅವರು,  ಟೆಂಡರ್ ಮಾಡುವ ಸಂದರ್ಭದಲ್ಲಿ ಒಟ್ಟು ನಾಲ್ಕು ಕಂಪನಿಯವರು ಅರ್ಜಿ ಸಲ್ಲಿಸಿದ್ದಾರೆ.

1) GVK-EMRI..2)BVG..3)SUMITH.4) ಎಡುಸ್ಟಾರ್ಕ ಈ ನಾಲ್ಕು ಕಂಪನಿಗಳು ಅರ್ಜಿ ಸಲ್ಲಿಸಿದ್ದಾರೆ.ನಾಲ್ಕು ಕಂಪನಿಯಲ್ಲಿ ಎಡುಸ್ಟಾಕ್೯ ಎಂಬ ಅನುಭವ ಇಲ್ಲದ ಕಂಪನಿಗೆ ಟೆಂಡರ್ ನೀಡಿದ್ದಾರೆ  ಸಚಿವ ಪ್ರಭು ಚವ್ಹಾಣ ಎಂದು ಬೀದರ್ ನಲ್ಲಿ ಬಿಜೆಪಿ ಮುಖಂಡ ರವಿ ಸ್ವಾಮಿ ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group