ಕವನ: ವೀರ ಸನ್ಯಾಸಿಗೆ ಅಕ್ಷರ ನಮನ

Must Read

 

ವೀರ ಸನ್ಯಾಸಿಗೆ ಅಕ್ಷರ ನಮನ 

ಸೂರ್ಯ ತೇಜಸ್ಸು ಕಣ್ಣ ಕಾಂತಿ

ನೀಲಾಕಾಶದ ಹೊಳಪು

ಪೂರ್ಣಚಂದಿರನ ವದನಾರವಿಂದ

ನಕ್ಷತ್ರ ಪುಂಜದ ಬೆಳಕು

ಭವ್ಯ ಭಾರತದ ಕನಸ ನನಸಾಗಿಸೆ

ಹಗಲಿರುಳು ದುಡಿದೆ

ಭರತ ಖಂಡದ ಹಿರಿಮೆ ಗರಿಮೆಯ 

ವಿಶ್ವದೆಲ್ಲೆಡೆ ಪಸರಿಸಿದೆ 

ಯುವಕರ ನರ ನಾಡಿಯ ಮಿಡಿದೆ

ದೇಶಪ್ರೇಮವ ತುಂಬಿ

ಭಾರತದ ಭವ್ಯ ಭವಿಷ್ಯವ ಬರೆದೆ

ಯುವ ಸಮೂಹವ ನಂಬಿ

ಏಳಿ ಎದ್ದೇಳಿ ಗುರಿ ಮುಟ್ಟುವ ತನಕ

ನಿಲ್ಲದಿರಿ ಎಂದೆ

ಕ್ಷಾತ್ರ ತೇಜದ ಬೀಜಗಳ ಬಿತ್ತಿ

ಮುನ್ನುಗ್ಗುತ ಮುಂದೆ

ಸೃಷ್ಟಿಸಿದೆ ಅಚ್ಚಳಿಯದಿತಿಹಾಸ

ಭಾರತದ ಪುಟಗಳಲಿ

ನೆಲೆಸಿದೆ ಕೋಟಿ ಕೋಟಿ

ನವ ಯುವಕರ ಎದೆಯಲಿ

ಭಾರತದ ದ್ರುವತಾರೆ ಮಿಂಚುತಿದೆ 

ಯುವಕರ ಕಣ್ಗಳಲಿ

ವೀರ ಸನ್ಯಾಸಿಯೇ… ಕರಮುಗಿದು 

ನಮಿಪೆವು ನಿನ್ನ ಪಾದಾರವಿಂದದಲಿ


ದೇವರಾಜ್ ನಿಸರ್ಗತನಯ

ಬಂಗಾರಪೇಟೆ 

9845527597

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group