Homeಸುದ್ದಿಗಳುಸ್ವಾತಂತ್ರ್ಯೋತ್ಸವ ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮ

ಸ್ವಾತಂತ್ರ್ಯೋತ್ಸವ ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮ

ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನಹಡಗಲಿ ವತಿಯಿಂದ ಸ್ವಾತಂತ್ರ್ಯೋತ್ಸವ ನಿಮಿತ್ತ ದಿನಾಂಕ ೧೫-೮-೨೦೨೪ ಗುರುವಾರ ಸಂಜೆ ೪ ಗಂಟೆಗೆ ಕರ್ನಾಟಕ ಧ್ವನಿ ರಾಜ್ಯಮಟ್ಟದ ದೇಶಭಕ್ತಿ ಗೀತೆ ಕಾರ್ಯಕ್ರಮವನ್ನು ಆಯೋಜಿಸಿದೆ.

ರಾಜ್ಯಾಧ್ಯಕ್ಷ ಮಧುನಾಯ್ಕ ಲಂಬಾಣಿ ಅಧ್ಯಕ್ಷತೆಯಲ್ಲಿ ಗೂಗಲ್ ಮೀಟ್‌ನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಾಹಿತಿ ಗೊರೂರು ಅನಂತರಾಜು ಹಾಸನ, ರವೀಂದ್ರ ಡಿಗ್ಗಿ ಬೀದರ್, ರಾಮು ಎನ್ ರಾಠೋಡ್ ಮಸ್ಕಿ, ನಾಗಪ್ಪ ಎಸ್ ಹೆಗ್ಗೇರಿ, ಪ್ರಕಾಶ್ ಹೂಗಾರ ಭಾಗವಹಿಸುವರು.

ದೇಶಭಕ್ತಿ ಗೀತೆ ಗಾಯನದಲ್ಲಿ ಚೇತನ್ ಲಮಾಣಿ, ಪಂಪಾಪತಿ, ರಾಜೂರು ಅಕ್ಕಮಹಾದೇವಿ, ತೋಯಶಾಚಾರ ದಾವಣಗೆರೆ, ವೈಷ್ಣವಿ ಸುಧೀಂದ್ರರಾವ್, ಸವಿತಾ ಶ್ರೀಧರ್ ಅರಕಲಗೂಡು, ವಾಲ್ಯನಾಯ್ಕ ಎಲ್. ಕಲ್ಪನ ಕಲಬುರಗಿ, ಬಸವರಾಜ್ ಕಟ್ಟಿ, ಶ್ರೀದೇವಿ ಕಂಚಗಾರ, ಶಾಮೀದಾಬೇಗಂ, ಬಾಲು ರಾಥೋಡ್, ವಿಜಯಲಕ್ಷ್ಮಿ ಚಿನಿವಾರ್ ಟಿ.ಎನ್. ಅನಿಲ್ ಕಾಂಬಳೆ ಬೆಳಗಾವಿ, ಪ್ರೇಮ್‌ಚಂದ್ ಎಲ್. ಪಿ, ಮೇಘಾ ತೇರದಾಳ, ರೇವತಿ ವೈದ್ಯ ಭಟ್ಕಳ, ಜಗದೀಶ ಜಿ.ಎಮ್ ಕಾಟ್ರಹಳ್ಳಿ, ಧನಲಕ್ಷ್ಮಿ ಹಾಸನ, ಸುಮಂಗಲಾ ದೇಸಾಯಿ ಜೋಯಿಡಾ, ರಾಜು ರಮಾನಾಯ್ಕ, ಕವಿತಾ ಬಾಯಿ ಭದ್ರಾವತಿ, ಮಾನಸ ಮಂಜುನಾಥ, ಪರಪ್ಪ ಕರಿಗಾರ ಗದಗ, ಭಾರತಿ ಸಿ, ಪ್ರೇಮ ಸಂತೋಷ, ಲೋಕೇಶ್ ಮಕರಿ, ದೀಪಾಬಾಯಿ, ಶಂಭುಲಿಂಗಪ್ಪ, ವೀಣಾ ಪಿ.ಎಮ್ ಕೊಪ್ಪಳ, ಜಯಶ್ರೀ ಚೆನ್ನಪ್ಪ, ಭಾಗ್ಯಲಕ್ಷ್ಮಿ ಹಾಸನ. ರೇಣುಕಾ ಎಲ್.ಪಿ. ಸ್ಫಂದನಾ ಎಸ್. ಕರಿಬಸಯ್ಯ ಎಮ್.ಬಿ, ಶೈಲಜಾ ದಾವಣಗೆರೆ, ಪುಷ್ಪ ಬಸವಪಟ್ಟಣ, ಹೆಚ್.ಶ್ರೀನಿವಾಸ, ದೀಪ ಭಾಗವಹಿಸುವರು.

ಭಾಗ್ಯ ನಾಗರಾಜ ಚಿತ್ರದುರ್ಗ ಪ್ರಾರ್ಥನೆ, ದೀಪಾಬಾಯಿ ಸ್ವಾಗತ ಹನುಮಂತ ನಾಯ್ಕ ಸಿ.ದಾವಣಗೆರೆ ನಿರೂಪಣೆ ಮಾಡುವರು. ಆಹ್ವಾನ ಪತ್ರಿಕೆಯಲ್ಲಿ ಹೆಸರು ಇಲ್ಲದವರಿಗೂ ಅವಕಾಶ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಕ. ರಾ.ಬ, ಸಂಘದ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group