ಕಣಚೂರು ಆಯುರ್ವೇದ ಆಸ್ಪತ್ರೆ ಉಚಿತ ಚಿಕಿತ್ಸಾ ಶಿಬಿರ

Must Read

ಮಂಗಳೂರು – ನಾಟೆಕಲ್ ನಲ್ಲಿರುವ ಕಣಚೂರು ಆಯುರ್ವೇದ ಆಸ್ಪತ್ರೆ ವತಿಯಂದ ಕನ್ಯಾನದ ಭಾರತ ಸೇವಾಶ್ರಮ ಆವರಣದಲ್ಲಿ ಉಚಿತ ಚಿಕಿತ್ಸಾ ಶಿಬಿರವನ್ನು ದಿನಾಂಕ 28  ರಂದು ಯಶಸ್ವಿಯಾಗಿ ನಡೆಸಲಾಯಿತು.

ಸೇವಾಶ್ರಮದ ಮುನ್ನೂರೈವತ್ತು ಆಶ್ರಮವಾಸಿಗಳ ರಕ್ತ, ಬಿ.ಪಿ ತಪಾಸಣೆ ಹಾಗೂ ಇತರ ತಪಾಸಣೆ ನಡೆಸಿ ಸೂಕ್ತ ಔಷಧಿಗಳನ್ನು ನೀಡಲಾಯಿತು.

ಆಸ್ಪತ್ರೆಯ ಪಂಚಕರ್ಮ ವಿಭಾಗದ ಮುಖ್ಯಸ್ಥ ಡಾ.ಜೈನುದ್ದೀನ್ ಹಾಗೂ ಇತರ ನಾಲ್ಕು ಮಂದಿ ವೈದ್ಯರೂ, ಇತರ ನರ್ಸ್ ಮತ್ತು ಲ್ಯಾಬ್ ಸಿಬ್ಬಂದಿಗಳೂ ಈ ಶಿಬಿರವನ್ನು ನಡೆಸಿಕೊಟ್ಟರು.

ಅಗತ್ಯವುಳ್ಳ ರೋಗಿಗಳಿಗೆ ಕಣಚೂರು ಆಸ್ಪತ್ರೆಯಲ್ಲಿ ಉಚಿತ ಒಳರೋಗಿ ಸೌಲಭ್ಯ ಹಾಗೂ ಎಲ್ಲರಿಗೂ ಆಯುಷ್ ಕಾರ್ಡ್ ನೀಡಲಾಯಿತು. ಈ ಶಿಬಿರವು ಪ್ರತಿ ತಿಂಗಳೂ ಮುಂದುವರೆಯುವುದು ಹಾಗೂ ಇತರ ಹಲವೆಡೆ ಸಹ ನಡೆಸಲಾಗುವ ಆಶಯ ಸಂಸ್ಥೆಯ ಚೇರ್ ಮನ್ ಹಾಜಿ ಡಾ ಕಣಚೂರು ಮೋನು ಅವರದಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸುರೇಶ ನೆಗಳಗುಳಿಯವರು ತಿಳಿಸಿರುತ್ತಾರೆ.

ಸೇವಾಶ್ರಮದ ಮುಖ್ಯಸ್ಥ ಶ್ರೀ ಈಶ್ವರ ಭಟ್ಟರು ಈ ಶಿಬಿರದ ಪೂರ್ಣ ವ್ಯವಸ್ಥೆಯನ್ನು ಮಾಡಿದ್ದರು.

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group