ಕೃಷಿ ಜಮೀನುಗಳಿಗೆ ಜಿಲ್ಲಾ ಕೃಷಿ ಪೀಡೆ ಸರ್ವೆಕ್ಷಣಾ ತಂಡದ ಭೇಟಿ, ಸಲಹೆ

Must Read

ಮೂಡಲಗಿ:- ತಾಲೂಕಿನ ವಿವಿಧ ಗ್ರಾಮಗಳಲ್ಲಿನ ರೈತರ ಕೃಷಿ ಜಮೀನುಗಳಿಗೆ ಜಿಲ್ಲಾ ಕೃಷಿ ಪೀಡೆ ಸರ್ವೆಕ್ಷಣಾ ತಂಡವು ಭೆಟ್ಟಿ ನೀಡಿ ಸದಕ ಹಾಗೂ ಗೋದಿ ಬೆಳೆಯ ತೆನೆ ಒಣಗುವಿಕೆ ಹಾಗೂ ಕೀಟ ಬಾಧೆ ಮತ್ತು ರೋಗದ ಕುರಿತು ರೈತರೊಂದಿಗೆ ಅವಲೋಕಿಸಿ ಮುಂಜಾಗ್ರತೆ ಅನುಸರಿಸಲು ಸಲಹೆ ನೀಡುವುದರ ಜೊತೆಗೆ ತೆನೆ ಒಣಗುವ ರೋಗಕ್ಕೆ ಮುಂಜಾಗ್ರತೆ ಕ್ರಮವಾಗಿ ಪ್ರೋಪಿಕೋನಾಜೋಲ (ಟಿಲ್ಟ) 1ಮೀ.ಲಿ ಹಾಗೂ 13:0:45 ನೀರಿನಲ್ಲಿ ಕರಗುವ ರಸಗೊಬ್ಬರ 5 ಗ್ರಾಂ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಸಲಹೆ ನೀಡಿದರು.

ತಂಡದ ಕ್ಷೇತ್ರ ಭೆಟ್ಟಿಯಲ್ಲಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಿ ಆಯ್ ಹೂಗಾರ, ತುಕ್ಕಾನಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಧನಂಜಯ ಚೌಗಲಾ, ಗೋಕಾಕ ಸಹಾಯಕ ಕೃಷಿ ನಿರ್ದೇಶಕ ಎಮ್ ಎಮ್ ನದಾಫ್ ಸಿಬ್ಬಂದಿಗಳಾದ ಪರಸಪ್ಪ ಹುಲಗಬಾಳ, ಎಲ್ಲವ್ವ ನಿಂಗನ್ನವರ ಹಾಗೂ ರೈತರು ಇದ್ದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group