spot_img
spot_img

ಡಾ.ಶಶಿಕಾಂತ ಪಟ್ಟಣ ಕವನಗಳು

Must Read

spot_img
- Advertisement -

ಬೇಡ ನಮಗೆ

ಬೇಡ ನಮಗೆ ಗುರು ವಿರಕ್ತರ ಗುದ್ದಾಟ
ಸಂಶೋಧಕರ ಹಗ್ಗ ಜಗ್ಗಾಟ
ಸ್ವಾಮಿಗಳ ಗದ್ದೆ ಕೆಸರಾಟ
ಜಾತಿವಾದಿಗಳ ಹುಚ್ಚಾಟ
ವಿಧಾನಸಭೆಗೆ ಮಂತ್ರ ಮಾಟ.
ಶಾಸಕರ ಕಾಮಕೇಳಿಯ ಆಟ
ಹೊರಗೆ ಚಳವಳಿ ಹೋರಾಟ
ಮತಗಳು ಆಗಲೆ ಮಾರಾಟ.
ಬೀದಿಯಲಿ ಬೋಧೆ ಪರಿಪಾಠ

ಸಾಕು ಅಕ್ಕ ಮಾತೆ ಶರಣರ ಸಂಗ
ವಚನಗಳಲಿ ತಿದ್ದುವರು ಮನಬಂದ ಲಿಂಗ
ನೋಡಿ ಕೈಮುಗಿಯುವ ನಾವುಗಳು ಮಂಗ
ಧರ್ಮವು ಬಡವರ ಅಫಿಮಿನ ಗುಂಗ.
ಮಕ್ಕಳಿಗಿಲ್ಲ ಹಾಕಲು ಹೊಸದೊಂದು ಲಂಗ
ಮಠಗಳಲಿ ನಡೆದಿದೆ ಮಹಿಳೆಯ ಮಾನಭಂಗ
ಹುಣ್ಣಿಮೆ ಅಮವಾಸೆ ಅಬ್ಬರದ ಗುರುಲಿಂಗ
ಕೊಳ್ಳೆ ಹೊಡೆಯಲು ಆಶ್ರಮದ ಘನಲಿಂಗ
ಬಸವನರಿತರೂ ಏಳದ ಬಂಡು ದಂಗ
——————————————
ಇತ್ಯರ್ಥವಾಗಿಲ್ಲ

- Advertisement -

ಮೊಟ್ಟೆ ಮೊದಲೋ ಕೋಳಿಯೋ?
ಇನ್ನೂ ಇತ್ಯರ್ಥವಾಗಿಲ್ಲ .
ಬೀಜವೊ ಮರ ಮೊದಲೋ ?
ಇತ್ಯರ್ಥವಾಗಿಲ್ಲ .
ಮಂಗನಿಂದ ಮಾನವನೋ ?
ಮಾನವನು ಮಂಗನೋ ?
ಇತ್ಯರ್ಥವಾಗಿಲ್ಲ
ಪಾಕ್ ಆಕ್ರಮಿತ ಕಾಶ್ಮೀರ
ನಮ್ಮದೋ ಅಲ್ಲವೋ ?
ಇತ್ಯರ್ಥವಾಗಿಲ್ಲ
ಮಹದಾಯಿ ಜೋಡಣೆ
ಕಳಸಾ ಭಂಡೂರಿ ನೀರು
ಇತ್ಯರ್ಥವಾಗಿಲ್ಲ
ಗಡಿ ತಂಟೆ ಭಾಷಾ ಪ್ರಶ್ನೆ
ಬೆಳಗಾವಿ ಯಾರದು ?
ಇತ್ಯರ್ಥವಾಗಿಲ್ಲ
ಕೃಷ್ಣಾ ಕಾವೇರಿ ತುಂಗಾ ಹಂಚಿಕೆ
ಮೇಕೆ ದಾಟು ಹೊಗೇನಕಲ್ಲು
ಇತ್ಯರ್ಥವಾಗಿಲ್ಲ
ಕೋರ್ಟ್ ನಲ್ಲಿ ಕೊಳೆಯುತ್ತಿವೆ
ನ್ಯಾಯದ ಅರ್ಜಿ ಅಹವಾಲುಗಳು .
ಇತ್ಯರ್ಥವಾಗಿಲ್ಲ
ನಮ್ಮವರು ಮತ ಹಾಕುತ್ತಾರೆ
ಟಿವಿ ನೋಡುತ್ತಾರೆ ಪತ್ರಿಕೆ ಇಣುಕುತ್ತಾರೆ.
ಗ್ರಾಮ ರಾಜ್ಯದ ಕನಸು
ರೈತ ಕೂಲಿ ಕಾರ್ಮಿಕರ ನನಸು
ಭಾರತವು ಮುಕ್ತವಾಗಿದೆಯಾ ?
ಇತ್ಯರ್ಥವಾಗಿಲ್ಲ .

ಡಾ.ಶಶಿಕಾಂತ.ಪಟ್ಟಣ.ಪೂನಾ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮುಖ್ಯಮಂತ್ರಿಗಳಿಗೆ ಮಾಧ್ಯಮ ಲೋಕದ ನೂತನ ಪುಸ್ತಕ: ಹಿರಿಯರ ಸೇವೆ ಶ್ಲಾಘನೀಯ ಎಂದ ಸಿಎಂ

ಬೆಂಗಳೂರು: ಅಮೃತ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಾಧ್ಯಮದ ಹಿರಿಯ ಪತ್ರಕರ್ತರ ಮನೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವೇ ಭೇಟಿ ನೀಡಿ ಕುಟುಂಬಸ್ಥರ ಸಮ್ಮುಖದಲ್ಲಿ ಹಿರಿಯರನ್ನು ಗೌರವಿಸಿರುವುದು ಅಭಿನಂದನಾರ್ಹವಾದದ್ದು...
- Advertisement -

More Articles Like This

- Advertisement -
close
error: Content is protected !!
Join WhatsApp Group