ಕವನ : ನೆನಪಾದ ಬಸವಣ್ಣ

Must Read

ನೆನಪಾದ ಬಸವಣ್ಣ

ನೆನಪಾದ ಬಸವಣ್ಣ
ಅಡಿಗಡಿಗೆ
ಅವರಿವರ ಆಚಾರ
ವಿಚಾರ
ಅಜ್ಞಾನದ ಪರಮಾವಧಿ
ಕಂಡು
ಎತ್ತ ಸಾಗಿದೆ ಜನರ
ಜೀವನ ಸಿದ್ಧಾಂತ
ವೈಚಾರಿಕ ನಿಲುವು
ಎಂಬ ಕಳವಳವ
ಹೊತ್ತು ನೆನಪಾದ
ಬಸವಣ್ಣ ಅಡಿಗಡಿಗೆ

ಕಂಡ ಕಂಡಲ್ಲಿ ಮುಳುಗುವವರ
ದೇವರ ಹೆಸರಲ್ಲಿ
ಉಪವಾಸ ಮಾಡುವವರ
ಅಭಿಷೇಕ ಮಾಡಿಸಿ
ಗುಡಿಯ ಸುತ್ತುವವರ
ಅಂಧಕಾರದ ಮನವ ಕಂಡು
ನೆನಪಾದ ಬಸವಣ್ಣ
ಅಡಿಗಡಿಗೆ

ತನ್ನೊಳಗಿನ ಪ್ರಜ್ವಲಿಸುವ
ಜ್ಯೋತಿಯ ಕಾಣದೆ
ತನ್ನ ಕೆಲಸವನ್ನು ತಾನು ಮಾಡದೆ
ಹಗಲಿರುಳು ಜಪ ಮಾಡುವ
ಭಂಡ ಭಕ್ತರ ನೋಡಿ
ನೆನಪಾದ ಬಸವಣ್ಣ
ಅಡಿಗಡಿಗೆ

ಸಮಾನತೆಯ ಮೆರೆಯದೆ
ಭೇದ -ಭಾವ ಅರಸುವ
ವ್ಯಾಮೋಹದಲ್ಲಿ ಮಿಂದು
ಸ್ವಾರ್ಥಿಯಾಗುವ
ಗೊಡ್ಡು ಸಂಪ್ರದಾಯಗಳಿಗೆ
ಮೊರೆಹೋಗುವ ವೈದಿಕ
ಮನಸುಗಳ ಕಂಡು
ನೆನಪಾದ ಬಸವಣ್ಣ
ಅಡಿಗಡಿಗೆ

ಸುಧಾ ಪಾಟೀಲ
ಬೆಳಗಾವಿ

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group