ಚನ್ನಮ್ಮನ ಕಿತ್ತೂರು ತಾಲ್ಲೂಕಿನ, ದೇವಗಾಂವ ಗ್ರಾಮದ ಭರವಸೆಯ ಲೇಖಕಿ, ಶಿಕ್ಷಕಿ ಹಾಗೂ ಫೀನಿಕ್ಸ್ ಫೌಂಡೇಶನ್ ಸಂಸ್ಥಾಪಕರೂ ಆದ ಶ್ರೀಮತಿ ಮೀನಾಕ್ಷಿ ಸುರೇಶ್ ಭಾಂಗಿ(ಸೂಡಿ) ಅವರು ಪ್ರಸಕ್ತ ಸಾಲಿನಲ್ಲಿ ಪಡೆದ ಪ್ರಶಸ್ತಿಗಳಾದ ಕರ್ನಾಟಕ ಮಹಿಳಾ ರತ್ನ ಹಾಗೂ ಇಂಟರ್ ನ್ಯಾಷನಲ್ ಪ್ರೈಡ್ ಆಫ್ ಇಂಡಿಯಾವಪ್ರಶಸ್ತಿ ಪಡೆದ ನಿಮಿತ್ತವಾಗಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದಿಂದ ದಿನಾಂಕ 29 ರಂದು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀಮತಿಯವರು ಶೈಕ್ಷಣಿಕವಾಗಿ ಹಾಗೂ ಸಾಹಿತ್ಯಿಕವಾಗಿ ಮಾಡಿದ ಅನುಪಮ ಸೇವೆಗಾಗಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ