ವಚನಗಳು ವ್ಯಕ್ತಿತ್ವ ವಿಕಸಿತಗೊಳಿಸುತ್ತವೆ : ಎಂ ಬಿ ಒಂಟಿ

Must Read

ಹುನಗುಂದ: ಅನೇಕ ಮಾನವೀಯ ಮೌಲ್ಯಗಳ ಆಗರವಾಗಿರುವ ಬಸವಾದಿ ಶರಣರ ವಚನಗಳು ವ್ಯಕ್ತಿತ್ವವನ್ನು ವಿಕಸಿತಗೊಳಿಸುತ್ತವೆ ಎಂದು ಹುನಗುಂದದ ಕನ್ನಡ ಪ್ರಾಧ್ಯಾಪಕ ಡಾ ಮುರ್ತುಜಾ ಬ ಒಂಟಿ ಹೇಳಿದರು.

ಪಟ್ಟಣದ ಶ್ರೀ ಗಜ್ಜನ ಮಠದ ಪೂಜ್ಯಶ್ರೀ ಲಿಂ ಮ ನಿ ಪ ಮುರುಗೇಂದ್ರ ಮಹಾಸ್ವಾಮಿಗಳವರ 60ನೇ ಪುಣ್ಯ ಸ್ಮರಣೋತ್ಸವ ವಿಶೇಷ ಉಪನ್ಯಾಸ ಹಾಗೂ ಮಹಾಶಿವ ಶರಣೆ ವರದಾನಿ ಗುಡ್ಡಾಪುರ ದಾನಮ್ಮ ದೇವಿಯ ಪುರಾಣ ಪ್ರವಚನದ ನಿಮಿತ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ವಚನ ವಿಶ್ಲೇಷಣಾ ಕಾರ್ಯಕ್ರಮ ನ್ಯಾಯ ನಿರ್ಣಾಯಕ ರಾಗಿ ಆಗಮಿಸಿ ಮಾತನಾಡಿದ ಅವರು, ಸಕಲ ಜೀವಿಗಳಿಗೆ ಒಳಿತನ್ನು ಬಯಸುವ ವಿಶ್ವವಿಶಾಲ ಭಾವನೆಯನ್ನು ಹೊಂದಿದ್ದ ಶರಣರ ಚಿಂತನೆಗಳು, ನುಡಿದಂತೆ ನಡೆದು ತೋರಿಸಿದ ಅವರ ಅದರ್ಶ ಎಲ್ಲರಿಗೂ ಮಾದರಿಯಾಗಬೇಕು ಎಂದರು. ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಬೇಕು ಎಂದು ಅವರು ಅಭಿಪ್ರಾಯಪಟ್ಟರು.

ವಚನ ಸಾಹಿತ್ಯದಲ್ಲಿರುವ ಸಾತ್ವಿಕ ವಿಚಾರಗಳನ್ನು ತಾತ್ವಿಕ ಸಂದೇಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಂದು ಹೇಳಿದರು. 12 ನೆಯ ಶತಮಾನದಲ್ಲಿ ಸಮಾನತೆಯ ಅಡಿಪಾಯದ ಮೇಲೆ ಕಲ್ಯಾಣ ಸಮಾಜವನ್ನು ನಿರ್ಮಿಸಿದ ಮಹಾನ್ ದಾರ್ಶನಿಕ ಬಸವಣ್ಣನವರ ದೂರದೃಷ್ಟಿ ಅವರ ಶ್ರೇಷ್ಠತೆಯ ಪ್ರತೀಕ ವಚನಗಳು ಇಂದಿನ ಯುವಕರಿಗೆ ಸ್ಫೂರ್ತಿಯ ಸೆಲೆಗಳಾಗಿವೆ. ಜಗತ್ತಿನಲ್ಲಿಯೇ ನಿಜವಾದ ಸಂಪತ್ತಾದ. ಜ್ಞಾನದ ಹಸಿವು ಇರುವ ವಿದ್ಯಾರ್ಥಿಗಳು ಮಾತ್ರ ದೊಡ್ಡ ಸಾಧನೆ ಮಾಡಬಲ್ಲರು. ಇಂದಿನ ಮೊಬೈಲ್ ಯುಗದಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಮನಸ್ಸಿಗೆ ನೆಮ್ಮದಿ ನೀಡುವುದಲ್ಲದೇ ಅಂತರಂಗದಲ್ಲಿ ಅರಿವಿನ ಬೆಳಕು ಮೂಡಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸ್ಥಳೀಯ ಪುರಸಭೆ ಸದಸ್ಯ ಮಹೇಶ ಬೆಳ್ಳಿ ಹಾಳ ಪ್ರಾಸ್ತಾವಿಕವಾಗಿ ಮಾತನಾಡಿ ಗಚ್ಚಿನ ಮಠದ ಅಮರೇಶ್ವರ ದೇವರು ಮುಂದಾಳತ್ವದಲ್ಲಿ ಅವರ ಶಾಖಾ ಮಠವಾದ ಮರಿದೇವರ ಮಠವನ್ನು 40 ಲಕ್ಷಕ್ಕೂ ಹೆಚ್ಚು ಅನುದಾನದಲ್ಲಿ ಜೀರ್ಣೋದ್ಧಾರ ಗೊಳಿಸಿದ್ದಾರೆ ಮಠದ ಲೋಕಾರ್ಪಣೆ ಕಾರ್ಯಕ್ರಮವು ಕಾರ್ಯಕ್ರಮವು ಶೀಘ್ರದಲ್ಲೇ ನೆರವೇರಲಿದೆ ಭಕ್ತರ ಹೃದಯವನ್ನು ಗೆದ್ದ ಅಮರೇಶ್ವರ ದೇವರು ಎಂದು ಹೇಳಿದರು

ಮೆಗಲುಪೇಟೆಯ ಹಿರಿಯರು, ಶ್ರೀ ಮಠದ ಅಮರೇಶ್ವರ ದೇವರನ್ನು ಸನ್ಮಾನಿಸಿದರು ವೇದಿಕೆಯಲ್ಲಿ ಉಪಸ್ಥಿತರಿದ್ದ ಮೇಗಲ್ ಪೇಟೆಯ ಹಿರಿಯರಾದ ಪರಸಪ್ಪ ಆಲೂರ ಬಸು ಹೂನ್ನಳ್ಳಿ ಮಲ್ಲಣ್ಣ ಲೆಕ್ಕಿಹಾಳ ಭರವಪ್ಪ ಬೆಣ್ಣಿ, ಶ್ರೀ ಮಠದ ವತಿಯಿಂದ ಸನ್ಮಾನಿಸಲಾಯಿತು, ಗವಾಯಿ ಹನುಮಂತ ಕುಮಾರ್ ಮೇಟಿ ಪ್ರಾರ್ಥಿಸಿದರು ಮಹೇಶ ಬೆಳ್ಳಿಹಾಳ ಸ್ವಾಗತಿಸಿದರು ಡಾ. ಶಿವಗಂಗಾ ರಂಜನಿಗಿ ಶಿಕ್ಷಕಿ ಗೀತಾ ತಾರಿವಾಳ, ನಿರೂಪಿಸಿದರು ಅರುಣೋದಯ ದುದ್ಗಿ ವಂದಿಸಿದರು

Latest News

ಕವನ ರಚನೆ ಬದುಕಿಗೆ ಮರುಸೃಷ್ಟಿ ಆಗಬಲ್ಲುದು – ಸುಮಾ ಕಿತ್ತೂರ

ಲೇಖಕಿಯರ ಸಂಘದಿಂದ ದತ್ತಿನಿಧಿ ಕಾರ್ಯಕ್ರಮ ಹಾಗೂ ಕವಿಗೋಷ್ಠಿಬೆಳಗಾವಿ - ಪ್ರತಿ ಕವಿಯ ಕವಿತೆಗೆ ಒಂದು ಮೌಲ್ಯವಿದೆ ಅದನ್ನು ಆಸಕ್ತಿಯಿಂದ ಕೇಳುವ ಹಾಗೂ ಅದಕ್ಕೆ ಸ್ಪಂದಿಸುವುದು ಎಲ್ಲರ...

More Articles Like This

error: Content is protected !!
Join WhatsApp Group