ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

Must Read
     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ, ಕೇವಲ ಒಂದು ಧಾರ್ಮಿಕ ಸಮಾರಂಭವಲ್ಲ; ಅದು ಸಂಸ್ಕೃತಿ, ಶ್ರದ್ಧೆ ಮತ್ತು ಆಂತರಿಕ ಶಾಂತಿಯ ಸಂಭ್ರಮವಾಗಿತ್ತು.

  ಮಸ್ಕಟ್‌ನ ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರ ಸಭಾಂಗಣದಲ್ಲಿ ಶ್ರೀ  ಶ್ರೀನಿವಾಸ ಭಕ್ತ ವೃಂದ, ಓಮಾನ್ ಇವರ ಆಶ್ರಯದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ವೈಭವದಿಂದ ನಡೆಯಿತು. ಬೆಂಗಳೂರಿನ ಶ್ರೀವಾರಿ ಫೌಂಡೇಷನ್‌ನ ಅಭಿನವ ಅನ್ನಮಾಚಾರ್ಯರೆಂದೇ ಖ್ಯಾತರಾದ ಎಸ್. ವೆಂಕಟೇಶಮೂರ್ತಿ ಅವರ ನೇತೃತ್ವದಲ್ಲಿ ನಡೆದ ಇದು 714ನೇ ಕಲ್ಯಾಣೋತ್ಸವವಾಗಿದೆ.

ಶೋಭಾಯಾತ್ರೆಯಿಂದ ಆರಂಭಗೊಂಡ ಉತ್ಸವದಲ್ಲಿ ಷೋಡಶೋಪಚಾರ, ಪಾದಪೂಜೆ, ಕನ್ಯಾದಾನ ಸಂಕಲ್ಪ, ಮಾಂಗಲ್ಯಧಾರಣೆ, ಪುಷ್ಪಾರ್ಚನೆ, ಚಾಮರ ಸೇವೆ ಸೇರಿದಂತೆ ಎಲ್ಲ ವಿಧಿವಿಧಾನಗಳು ಶಾಸ್ತ್ರಬದ್ಧವಾಗಿ ನೆರವೇರಿದವು. ವಿಶೇಷವಾಗಿ ಏಕಾಂತ ಸೇವೆ ಭಕ್ತರ ಮನಸ್ಸನ್ನು ಆಳವಾಗಿ ಸ್ಪರ್ಶಿಸಿತು.

ಮೂರು ಸಾವಿರಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದು ಪುನೀತರಾದರು. ಖ್ಯಾತ ಅಧ್ಯಾತ್ಮ ಚಿಂತಕಿ ಡಾ. ವೀಣಾ ಬನ್ನಂಜೆ, ವಿವಿಧ ದೇಶಗಳ ರಾಯಭಾರಿಗಳು, ಗಣ್ಯ ಉದ್ಯಮಿಗಳು ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಪ್ರಮುಖರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಅನ್ನಮಾಚಾರ್ಯರ ನಾದದಲ್ಲಿ ಆರಂಭಗೊಂಡ ಉತ್ಸವ, ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಭಕ್ತರ ಮನಸ್ಸನ್ನು ಆವರಿಸಿತು. ಮೌನವೇ ಪೂಜೆಯಾದ ಏಕಾಂತ ಸೇವೆ, ಭಗವಂತನೊಂದಿಗೆ ಭಕ್ತನ ನಿಶ್ಶಬ್ದ ಸಂವಾದದಂತಿತ್ತು. ತಿರುಮಲೆಗೆ ತೆರಳಲಾಗದ ಭಕ್ತರಿಗೆ, ಮಸ್ಕಟ್‌ನ ಈ ಕ್ಷಣಗಳು ತಿರುಮಲೆಯ ಶಯನ ಮಂಟಪದ ಸ್ಮರಣೆಯಾಗಿ ಹೃದಯದಲ್ಲಿ ನೆಲೆಸಿದವು.

ವಿದೇಶಿ ನೆಲದಲ್ಲೂ ಭಾರತೀಯ ಆತ್ಮಸಂಸ್ಕೃತಿ ಜೀವಂತವಾಗಿರಬಹುದು ಎಂಬುದಕ್ಕೆ ಈ ಕಲ್ಯಾಣೋತ್ಸವವೇ ಸಾಕ್ಷಿಯಾಯಿತು.

LEAVE A REPLY

Please enter your comment!
Please enter your name here

Latest News

‘ಯೋಗದೂತ’ ‘ ಯೋಗಪ್ರದರ್ಶನದ ಗಾರುಡಿಗ’ ‘ಯೋಗ ತಿರುಕ’ ಪ್ರೊ.ಲಕ್ಷ್ಮಣಕುಮಾರ ಸಣ್ಣೆಲ್ಲಪ್ಪನವರ

ಕರ್ನಾಟಕಕ್ಕೆ ಸಂದ ಭಾರತ ಸರ್ಕಾರದ ' ಪಿ ಎಮ್ ಯೋಗ ಪ್ರಶಸ್ತಿ' ('PM YOGA AWARD')(ದಿ. 21-01-2026 ರಂದು ಪ್ರೊ.ಲಕ್ಷ್ಮಣಕುಮಾರ ಅವರ 91 ನೇ ಜನ್ಮದಿನ) ನಿಮಿತ್ತ...

More Articles Like This

error: Content is protected !!
Join WhatsApp Group