ಲೇಖಿಕಾ ಸಾಹಿತ್ಯ ವೇದಿಕೆಯು ” ವಾಣಿ ಸ್ಮರಣೆ” ಯ ಅಂಗವಾಗಿ ಆಯೋಜಿಸಿದ್ದ – ವಾಣಿ ಕೌಟುಂಬಿಕ ಕಥಾಸ್ಪರ್ಧೆ ೨೦೨೬ ರಲ್ಲಿ ದಕ.ಜಿಲ್ಲೆಯ ” ವಿಮಲಾರುಣ ” ೨೦೦೦ ರೂ. ಗಳ ಪ್ರಥಮ ಬಹುಮಾನ ಪಡೆದಿದ್ದಾರೆ. ದ್ವಿತೀಯ ಬಹುಮಾನ ” ಅಚಲ ಬಿ ಹೆನ್ಲಿ – ಬೆಂಗಳೂರು ರವರು ೧೦೦೦ ರೂ. ತೃತೀಯ ಬಹುಮಾನ ” ಟಿ.ಆರ್. ಉಷಾರಾಣಿ – ಬೆಂಗಳೂರು ೫೦೦ ರೂಗಳು ಮೆಚ್ವುಗೆ ಬಹುಮಾನ ೨೫೦ ರೂ ಗಳನ್ನು ಉ.ಕ.ಜಿಲ್ಲೆಯ ” ಟಿ. ಎಂ ರಮೇಶ – ಬೆಂಗಳೂರಿನ ಎನ್ ಶಂಕರ ರಾವ್ ಮತ್ತು ಯು ಎಸ್ ಎ ಯ ” ಸಾವಿತ್ರಿ ರಾವ್ ” ಪಡೆದಿದ್ದಾರೆ.
ಕಥಾಸ್ಪರ್ಧೆ ತೀರ್ಪುಗಾರರಾಗಿ ಖ್ಯಾತ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರ ಮೊಮ್ಮಗ ವಿವೇಕ್ ಪುರಾಣಿಕ – ಯು ಎಸ್ ಎ . ನಿರ್ವಹಿಸಿದ್ದರು. ಬಹುಮಾನಗಳ ಪ್ರಾಯೋಜಕತ್ವ ದೀಪಾ ರಾವ್ ಮತ್ತು ಎಲ್.ಗಿರಿಜಾ ರಾಜ್. ಬಹುಮಾನ ವಿತರಣೆಯನ್ನು ಫಲಿತಾಂಶ ೨೧ ರಂದು ದೊಡ್ಡ ಬಳ್ಳಾಪುರ ದಲ್ಲಿ ನೀಡಲಾಗುವುದು ಎಂದು ಲೇಖಿಕಾ ಸಾಹಿತ್ಯ ವೇದಿಕೆಯ ಸಂಚಾಲಕರು ಶೈಲಜಾ ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

