ಸಿಂದಗಿ: ಪಟ್ಟಣದ ಪುರಸಭೆ ಅಧ್ಯಕ್ಷ – ಉಪಾಧ್ಯಕ್ಷರು ಸದಸ್ಯರ ಗಮನಕ್ಕೆ ತಂದು ಯಾವುದೇ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ೧೬ ಜನ ಸದಸ್ಯರು ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಅದರ ಹಿನ್ನೆಲೆ ಏ. ೧೬ ರಂದು ಸಾಮಾನ್ಯ ಸಭೆ ಕರೆಯಲಾಗಿತ್ತು ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಆವಿಶ್ವಾಸ ಗೊತ್ತುವಳಿ ಮಂಡನೆ ಆದರೂ ಕೂಡಾ ಪುರಸಭೆ ಮುಖ್ಯಾಧಿಕಾರಿ ಎಸ್ ರಾಜಶೇಖರ ಅವರು ತಡವಾಗಿ ಪ್ರಕಟಿಸಿದ್ದು ಜನರಲ್ಲಿ ಗೊಂದಲ ಸೃಷ್ಟಿಸಿದೆ.
ಪುರಸಭೆ ಮುಖ್ಯಾಧಿಕಾರಿ ಎಸ್ ರಾಜಶೇಖರ ಮಾಧ್ಯಮದವರೊಂದಿಗೆ ಮಾತನಾಡಿ, ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಆವಿಶ್ವಾಸ ಗೊತ್ತುವಳಿ ಕುರಿತು ಸಾಮಾನ್ಯ ಸಭೆ ಕರೆಯುವಂತೆ ಕಲಬುರ್ಗಿ ಉಚ್ಚ ನ್ಯಾಯಾಲಯದ ದ್ವಿತೀಯ ಶ್ರೇಣಿ ನ್ಯಾಯಾದೀಶರ ಆದೇಶದ ಮೇರೆಗೆ ೧೬ ರಂದು ಸಭೆ ಕರೆಯಲಾಗಿತ್ತು. ಒಟ್ಟು ೨೩ ಸದಸ್ಯರಲ್ಲಿ ೨೦ ಜನ ಸದಸ್ಯರು ಮಾತ್ರ ಹಾಜರಾಗಿ ೩ ಜನ ಸದಸ್ಯರು ಗೈರು ಉಳಿದಿದ್ದು ಅದರಲ್ಲಿ ಅಧ್ಯಕ್ಷ ಶಾಂತವೀರ ಬಿರಾದಾರ ಹಾಗೂ ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ ವಿರುದ್ಧ ೧೫ ಮತಗಳು ಪರವಾಗಿ ೫ ಮತಗಳು ಬಿದ್ದು ಅವಿಶ್ವಾಸ ನಿರ್ಣಯವಾಗಿ ಹಂಗಾಮಿ ಅಧ್ಯಕ್ಷರಾಗಿ ಹಣಮಂತ ಸುಣಗಾರ,ಅವರು ನೇಮಕವಾಗಿದ್ದಾರೆ ಎನ್ನುವ ಮಾಹಿತಿಯನ್ನು ಮೇಲಧಿಕಾರಿಗಳಿಗೆ ರವಾನಿಸಲಾಗಿದ್ದು ಈ ಪ್ರಕರಣ ಸರ್ವೋಚ್ಚ ನ್ಯಾಯಾಲಯದ ಅಂಗಳದಲ್ಲಿರುವ ಕಾರಣ ಬಹಿರಂಗ ಪಡಿಸಲು ಮಾಡಲು ವಿಳಂಬ ವಾಗಿದೆ. ಇದೇ ೨೩ ರಂದು ಸರ್ವೋಚ್ಚ ನ್ಯಾಯಾಲಯದ ವಿಚಾರಣೆಯಿದ್ದು ಪುರಸಭೆಯ ವಕೀಲರ ಸಲಹೆ ಪಡೆದುಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಎಂದು ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಹಂಗಾಮಿ ಅಧ್ಯಕ್ಷ ಹಣಮಂತ ಸುಣಗಾರ, ಸದಸ್ಯರಾದ ಭಾಷಾಸಾಬ ತಾಂಬೋಳಿ, ಗೊಲ್ಲಾಳ ಬಂಕಲಗಿ, ಸದಸ್ಯರ ಪ್ರತಿನಿಧಿಗಳಾದ ಶರಣಪ್ಪ ಸುಲ್ಪಿ, ಸೈಪನ ನಾಟಿಕಾರ, ಸಿಬ್ಬಂದಿ ಸಿದ್ದು ಅಂಗಡಿ, ಸಿನೇಟರಿ ಅಧಿಕಾರಿ ನಬಿರಸೂಲ ಉಸ್ತಾದ ಇದ್ದರು.