Homeಸುದ್ದಿಗಳುಕಲ್ಲೋಳಿಯಲ್ಲಿ ಅಲ್ಲಮಪ್ರಭು ಎಫ್.ಪಿ.ಒ ಪ್ರಾರಂಭೋತ್ಸವ

ಕಲ್ಲೋಳಿಯಲ್ಲಿ ಅಲ್ಲಮಪ್ರಭು ಎಫ್.ಪಿ.ಒ ಪ್ರಾರಂಭೋತ್ಸವ

ಮೂಡಲಗಿ: ರೈತರ ಉತ್ಪಾದನೆಗಳಿಗೆ ಮೌಲ್ಯವರ್ಧನೆ ಹಾಗೂ ಸಾಮೂಹಿಕ ಮಾರುಕಟ್ಟೆ ಒದಗಿಸುವುದಕ್ಕಾಗಿ  ಭಾರತ ಸರಕಾರದ ಕೃಷಿ ಸಚಿವಾಲಯ, ಸಣ್ಣ ರೈತರ ಕೃಷಿ ವ್ಯಾಪಾರ ಒಕ್ಕೂಟ (ಎಫ್.ಎಸ್.ಎ.ಸಿ) ಹಾಗೂ ಇಕೋ ಸಂಪನ್ಮೂಲ ಸಂಸ್ಥೆಯ ಸಹಯೋಗದಲ್ಲಿ ನೂತನವಾಗಿ ಅಲ್ಲಮಪ್ರಭು ರೈತ ಉತ್ಪಾದಕ ಕಂಪನಿ ಲಿ., (ಎಫ್.ಪಿ.ಒ)  ಮಂಗಳವಾರ 24 ಅಕ್ಟೊಬರ್ 2023 ರಂದು ಕಲ್ಲೋಳಿಯಲ್ಲಿ ವಿಧ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ.

ಕಂಪನಿಯ ನೂತನ ಕಛೇರಿಯ ಉದ್ಘಾಟನೆಯನ್ನು ರಾಜ್ಯಸಭಾ ಸಂಸದರು ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅವರು ನೇರವೇರಿಸುವರು. 

ಅಧ್ಯಕ್ಷತೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ವಹಿಸುವರು. ಮುಖ್ಯ ಅತಿಥಿಗಳಾಗಿ ಗೋಕಾಕ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಂ.ನದಾಫ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ  ಮಲ್ಲಿಕಾರ್ಜುನ ಜನಮಟ್ಟಿ, ಇಕೋ ಸಂಪನ್ಮೂಲ ಸಂಸ್ಥೆಯ ಯೋಜನಾ ನಿರ್ದೇಶಕ ಆಯ್ ಎನ್. ದೊಡ್ಡಗೌಡರ ಸೇರಿದಂತೆ ಸಂಸ್ಥೆಯ ನಿರ್ದೇಶಕರು, ಸದಸ್ಯರು ಹಾಗೂ ಪ್ರಗತಿಪರ ರೈತರು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಯಕ್ಸಂಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group