ದೇಹ ಮನಸ್ಸು ಸಂಪೂರ್ಣ ಸಮತೋಲನದಲ್ಲಿರುವ ಸ್ಥಿತಿಯನ್ನು ಆರೋಗ್ಯ ಎಂದು ಕರೆಯಬಹುದು- ಸಿದ್ದಪ್ಪ ಸಾರಾಪುರೆ

Must Read

ಬೆಳಗಾವಿ – ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ವಾರದ ಸಾಮೂಹಿಕ ಪ್ರಾಥ೯ನೆ ವಚನ ವಿಶ್ಲೇಷಣೆ ಯೋಗ ಮತ್ತು ಆರೋಗ್ಯ ಕುರಿತು ದಿನಾಂಕ 11.05.2025.ರಂದು ಸಿದ್ದಪ್ಪ ಸಾರಾಪುರೆ ಉಪನ್ಯಾಸ ನೀಡಿದರು.

ಯೋಗವು ಮನುಷ್ಯನ ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯ. ಸರಳ ಮೊತ್ತವೂ ಹೌದು .ಯೋಗವು ಆರೋಗ್ಯಕರ ಜೀವನ ಶೈಲಿ ಕಲೆ ಮತ್ತು ವಿಜ್ಞಾನವಾಗಿದೆ. ಇದು ಅತ್ಯಂತ ಸೂಕ್ಷ್ಮವಾದ ವಿಜ್ಞಾನವನ್ನು ಆಧರಿಸಿದೆ. ಆಧ್ಯಾತ್ಮಿಕ ಶಿಸ್ತು. ಇದು ಮನಸ್ಸು ಮತ್ತು ದೇಹದ ನಡುವೆ ಆಧರಿಸಿದ ಯೋಗ, ಜೂನ 21 ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತಾರೆ ಎಂದು ಸಾರಾಪುರೆ ತಿಳಿಸಿದರು.

ಮಕ್ಕಳಿಗೆ ಯೋಗ ಮಾಡಿಸಿದರು. ಪ್ರಾರಂಭದಲ್ಲಿ ಜಿ ಪಿ ಜವಣಿ ಸಾಮೂಹಿಕ ಪ್ರಾಥ೯ನೆ ನಡೆಸಿಕೊಟ್ಟರು.ಆನಂದ ಕರಕಿ, ದಾಕ್ಷಾಯಿಣಿ ಪೂಜೇರಿ,ವಿ ಕೆ ಪಾಟೀಲ,ಬಸವರಾಜ ಬಿಜ್ಜರಗಿ,ಜಯಶ್ರೀ ಚವಲಗಿ,ಜಿ ಪಿ ಜವಣಿ,ಜ್ಯೋತಿ ನಾಯಕ,ವಚನ ವಿಶ್ಲೇಷಣೆ ಮಾಡಿದರು.

ಬಸವ ಜಯಂತಿಗೆ ಎಲ್ಲರೂ ಬಂದು ಯಶಸ್ವಿಗೊಳಿಸಿದ್ದಕ್ಕಾಗಿ ಅಭಿನಂದಿಸಿದರು ಶೇಖರ ವಾಲಿ ಇಟಗಿ, ದೊಡಗೌಡ ಪಾಟೀಲ, ಮಹಾಂತೇಶ ಮೆಣಸಿನಕಾಯಿ, ತಿಗಡಿ ದಂಪತಿಗಳು,ಕೆಂಪಣ್ಣಾ ರಾಮಾಪೂರೆ, ಅನಿಲ ರಘಶೆಟ್ಟಿ,ಬಿ ಎಸ್ ಮತ್ತಿಕೊಪ್ಪ, ಮಹಾಂತೇಶ ತೋರಣಗಟ್ಟಿ, ಬಸವರಾಜ ಪೂಜೇರಿ, ಶಿವಾನಂದ ನಾಯಕ, ನಿವಾ೯ಣಿ, ಮತ್ತಿಕೊಪ್ಪ,ವಿದ್ಯಾಥಿ೯ ವಿದ್ಯಾಥಿ೯ನಿಯರು ಶರಣಶರಣೆಯರು ಉಪಸ್ಥಿತರಿದ್ದರು. ಲಿಂಗಾಯತ ಸಂಘಟಣೆ ಪ್ರಸಾದ ಸೇವೆ ಏಪ೯ಡಿಸಿದ್ದರು. ಆನಂದ ಕರಕಿ ಸ್ವಾಗತಿಸಿ ನಿರೂಪಿಸಿದರು.ಸುರೇಶ ನರಗುಂದ ವಂದಿಸಿದರು.

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group