Homeಸುದ್ದಿಗಳುಏನಾದರೂ ಆಗುವ ಮೊದಲು ಮಾನವರಾಗಿ - ಜಿ.ಪಿ. ಹರ್ಷ ಬಾನು

ಏನಾದರೂ ಆಗುವ ಮೊದಲು ಮಾನವರಾಗಿ – ಜಿ.ಪಿ. ಹರ್ಷ ಬಾನು

ಮೂಡಲಗಿ: ಪ್ರತಿಯೊಬ್ಬರೂ  ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿ ಶಿಕ್ಷಣದವರೆಗೆ ಗಳಿಸಿದ ಜ್ಞಾನದಿಂದ ತಮಗೆ ಇಷ್ಟವಾದ ಖಾಸಗಿ ಅಥವಾ ಸರಕಾರಿ ಹುದ್ದೆಯ ಕಾರ್ಯದ ಜೊತೆಗೆ ದಯೆ, ಅನುಕಂಪ , ಮಾನವೀಯತೆಯನ್ನು ಮೈಗೂಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ದರ್ಪ, ಅಹಂಕಾರ ತೊರೆದು ಎಲ್ಲರೊಡನೆ ಬೆರೆತು ಏನಾದರೂ ಆಗುವುದಕ್ಕೆ ಮೊದಲು ಮಾನವರಾಗಿ ಎಂದು ಹರ್ಷ ಬಾನು ಉಪಅರಣ್ಯ ಸಂರಕ್ಷಣಾಧಿಕಾರಿಗಳು (ಕಾರ್ಯ ಯೋಜನೆ) ಬೆಳಗಾವಿ ಇವರು ಕರೆ ನೀಡಿದರು.

ಅವರು ಸ್ಥಳೀಯ  ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪದವಿ ಕಾಲೇಜು ಮೂಡಲಗಿಯಲ್ಲಿ  ಹಮ್ಮಿಕೊಂಡ  2023-24  ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ. ಎನ್,ಎಸ್,ಎಸ್, ಭಾರತ್ ಸ್ಕೌಟ್ & ಗೈಡ್ಸ, ಯುವ ರೆಡ್ ಕ್ರಾಸ್ ಘಟಕ ಇವುಗಳ ಕಾರ್ಯಚಟುವಟಿಕೆಗಳ ಉದ್ಘಾಟನಾ  ಸಮಾರಂಭ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, “ಪ್ರತಿಯೊಬ್ಬರ ಜೀವನವೂ ಅಮೂಲ್ಯವಾದುದು ಸ್ಪರ್ಧಾತ್ಮಕ ಬದುಕಿನಲ್ಲಿ ಬಾಳುತ್ತಿರುವ ನೀವೆಲ್ಲಾ ಉನ್ನತ ಹುದ್ದೆಯ ಕನಸನ್ನು ಕಾಣಬೇಕು; ಬರೀ ಕನಸು ಕಂಡರೆ ಸಾಲದು; ನನಸು ಮಾಡುವುದಕ್ಕೆ ಹಗಲಿರುಳು ಚಿಂತಿಸಬೇಕು. ಒಳ್ಳೆಯ ಗೆಳೆಯರ ಸಹವಾಸ ಮಾಡಬೇಕು ಪ್ರತಿದಿನ ನಡೆಯುವ ಘಟನೆಗಳ ಅವಲೋಕನ ಮಾಡಿಕೊಳ್ಳಬೇಕು, ಸಾಧಕರೊಂದಿಗೆ ಚರ್ಚಿಸಬೇಕು. ಹತ್ತು ವರ್ಷ ಸುಖದಿಂದಿರಬೇಕಾದರೆ ದಿನಕ್ಕೆ ಒಂದು ಘಂಟೆ ಓದಿಗೆ ಮೀಸಲಿಡಿ; ಮೂವತ್ತು ವರ್ಷ ಸುಖದಿಂದಿರಬೇಕಾದರೆ ದಿನಕ್ಕೆ ಮೂರು ಘಂಟೆ ಓದಿಗೆ ಮೀಸಲಿಡಿ.  ಐವತ್ತು  ವರ್ಷ ಸುಖದಿಂದಿರಬೇಕಾದರೆ ದಿನಕ್ಕೆ ಐದು ಘಂಟೆ ಓದಿಗೆ ಮೀಸಲಿಡಿ.  ಎತ್ತರವಾದ ಗುರಿಗಳನ್ನು ಇಟ್ಟುಕೊಳ್ಳಬೇಕು ಅದಕ್ಕಾಗಿ ಹಣ ಮತ್ತು ಸಮಯದ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾದರೆ ನಿಮ್ಮ ಬದುಕು ಬಂಗಾರವಾಗುತ್ತದೆ” ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಮಹೇಶ ವಾಯ್ ಕಂಬಾರರವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ “ಮಹಾವಿದ್ಯಾಲಯ ಇಂದು ಸಾಕಷ್ಟು ಅಗಾಧವಾಗಿ ಬೆಳೆದಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ನಿಟ್ಟಿನಲ್ಲಿ ಅವರ ಅಗತ್ಯಗಳನ್ನು ಪೂರೈಸಲು ಸಿದ್ಧವಿದೆ ಎಂದು ತಿಳಿಸಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಾವು ಮನೆಯಲ್ಲಿ ಕುಳಿತು ನೋಡುವಂತಾಗಲಿ” ಎಂದು ಹಾರೈಸಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಸಿದ್ಧ ಸಂಸ್ಥಾನಮಠದ ಪೂಜ್ಯರಾದ ಶ್ರೀ ಶ್ರೀಧರ ಸ್ವಾಮೀಜಿಗಳು ಆಶೀರ್ವಚನ ನೀಡಿ “ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಅಗಾಧವಾದ ಸಾಮರ್ಥ್ಯವಿದೆ ನಿಮ್ಮ ಬಾಳಿನ ಕನಸನ್ನು ಸತತ ಪರಿಶ್ರಮದಿಂದ ಅಭ್ಯಾಸ ಮಾಡಿ ನನಸು ಮಾಡಿಕೊಳ್ಳಿ. ಮಾನವ ಕುಲಕ್ಕೆ ಒಳಿತಾಗುವ ಕಾರ್ಯ ನಿರ್ವಹಿಸಿ ಶ್ರೀಕೃಷ್ಣ ಅರ್ಜುನನಿಗೆ ಹೇಳಿದ ಸಂದೇಶವನ್ನು ಪ್ರತಿಯೊಬ್ಬರೂ ಅರಿತುಕೊಂಡು ಕಾಲೇಜಿನ ಹೆಸರನ್ನು ಉಜ್ವಲಗೊಳಿಸಿ” ಎಂದು ಹೇಳಿದರು .        

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಿಡಿಸಿ ಸದಸ್ಯರಾದ ಸಂಜು ಮೊಕಾಶಿ, ಐ.ಕ್ಯೂ.ಎ.ಸಿ ಸಂಯೋಜಕರಾದ ಚೇತನ್ ರಾಜ್ ಬಿ  ಸಾಂಸ್ಕೃತಿಕ ಸಂಯೋಜಕರಾದ ಸಂಜೀವಕುಮಾರ ಗಾಣಿಗೇರ,  ಎನ್.ಎಸ್.ಎಸ್ ಸಂಯೋಜಕರಾದ ಸಂಜೀವ ಮದರಖಂಡಿ, ಕ್ರೀಡಾ ಸಂಯೋಜಕರಾದ ಡಾ. ರವಿ ಗಡದನ್ನವರ, ಸಿಬ್ಬಂದಿ ಕಾರ್ಯದರ್ಶಿಯಾದ ಬಿ.ಎಸ್. ಕೆಸರಗೊಪ್ಪ, ರೆಡ್ ಕ್ರಾಸ್ ಸಂಯೋಜಕರಾದ ಭೀಮರಾವ್ ನಾಯಕ, ಮಹಿಳಾ ವೇದಿಕೆಯ ಸಂಚಾಲಕರಾದ ಶ್ರೀಮತಿ ಗಾಯತ್ರಿ ಸಾಳೋಖೆ, ಸ್ಕೌಟ್ಸ್ ಗೈಡ್ಸ್ ಸಂಯೋಜಕರಾದ ನಟರಾಜ್ ಎಚ್, ಹಿರಿಯ ಉಪನ್ಯಾಸಕರಾದ ಎ.ಜಿ. ಗಿರೆನ್ನವರ, ಶ್ರೀಮತಿ ಸುಮಿತ್ರಾ ಮಾಸ್ತಿ, ಶಿವಕುಮಾರ, ಬಸಪ್ಪ ಹೆಬ್ಬಾಳ, ಶಿವಾನಂದ ಚಂಡಕೆ ಭಾಗವಹಿಸಿದ್ದರು.  ಪೂಜಾ ಸಂಗಡಿಗರು ಪ್ರಾರ್ಥಿಸಿದರು. ಕುಮಾರಿ ಸಮೃದ್ಧಿ ಜೋಕಿ ಸ್ವಾಗತಿಸಿದರು. ಉದಯ ಮಾಲಗೆನ್ನವರ  ವಂದಿಸಿದರು.ಯು.ಯು.ಸಿ.ಎಮ್.ಎಸ್ ಸಂಯೋಜಕರಾದ  ಶಾನೂರಕುಮಾರ ಗಾಣಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಅರ್ಪಿತಾ ಮಳವಾಡ ನಿರೂಪಿಸಿದರು.

RELATED ARTICLES

Most Popular

error: Content is protected !!
Join WhatsApp Group