Homeಸುದ್ದಿಗಳುಬೀದರ್; ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

ಬೀದರ್; ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

ಬೀದರ – ಮದುವೆಯಾಗಲು ಮನೆಯವರ ವಿರೋಧ ಬಂದಿದ್ದರಿಂದ ಮನನೊಂದ ಯುವ ಪ್ರೇಮಿಗಳು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದುರಂತ ಬೀದರ್ ತಾಲೂಕಿನ ಔರಾದ್ ಸಿರ್ಸಿ ಗ್ರಾಮದಲ್ಲಿ ನಡೆದಿದೆ.

ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸಿದ ಪ್ರೇಮಿಗಳು ಒಂದೇ ಹಗ್ಗದಿಂದ ನೇಣು ಬಿಗಿದುಕೊಂಡು ಪ್ರಾಣ ತೆತ್ತಿದ್ದಾರೆ.

ಭಾಗ್ಯ ಶ್ರೀ ( 19 ), ಧನರಾಜ್ ( 22 ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಪ್ರೇಮಿಗಳು. ಹುಡುಗಿ ಭಾಗ್ಯಶ್ರೀ ಕುರುಬ ಜಾತಿಗೆ ಸೇರಿದ್ದರೆ, ಹುಡುಗ ಧನರಾಜ್ ಕ್ರಿಶ್ಚಿಯನ್ ಜಾತಿಗೆ ಸೇರಿದ್ದಾನೆನ್ನಲಾಗಿದೆ. ಈ ಯುವ ಪ್ರೇಮಿಗಳ ಪ್ರೀತಿಗೆ ಎರಡೂ ಮನೆಯವರು ವಿರೋಧ ವ್ಯಕ್ತಪಡಿಸಿದ್ದು ಹುಡುಗಿಯನ್ನು ಬೇರೆ ಹುಡುಗನ ಜೊತೆ ಮದುವೆ ಮಾಡಿಕೊಡಲು‌ ಮುಂದಾದ ಹಿನ್ನೆಲೆ ‌ಮನನೊಂದ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಈ ಕುರಿತು ಬಗದಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group