ಬೀದರ: ಯಾವುದೇ ಅಗ್ನಿ ಅವಘಡಗಳು ಹಾಗೂ ವಿಪತ್ತು ನಿರ್ವಹಣೆ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿದರೆ, ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಬಹುದೆಂದು ಎಂದು ಜಿಲ್ಲಾಡಳಿತ, ಎನ ಡಿ ಆರ್ ಎಫ ಹಾಗೂ ಅಗ್ನಿಶಾಮಕ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ಬೀದರ ತಾಲೂಕಿನ ಜನವಾಡ ಕೆರೆಯಲ್ಲಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜನರು ಹೇಗೆ ರಕ್ಷಣೆ ಪಡೆಯಬೇಕು ಎಂಬುದರ ಅಣಕು ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜನವಾಡ ಆದರ್ಶ ವಿದ್ಯಾಲಯದ ಶಾಲೆಯ ಮಕ್ಕಳು ಸೇರಿದಂತೆ ಗ್ರಾಮಸ್ಥರಿಗೆ ಪ್ರಕೃತಿ ವಿಕೋಪ ಸಂಭವಿಸಿದರೆ ಜನರನ್ನು ಹೇಗೆ ರಕ್ಷಣೆ ಮಾಡಬೇಕು ಎಂಬುದರ ಅಣುಕು ಪ್ರದರ್ಶನ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಸಂಧರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ.ಎನ್ ಡಿ ಆರ ಎಫ್ 10ನೇ ಬಟಾಲಿಯನ್ ಕಮಾಂಡರ್ ಆಫಿಸರ್ ಪ್ರದಿಪಕುಮಾರ, ಅಗ್ನಿಶಾಮಕ ದಳದ ಅಧಿಕಾರಿ ಮುಜಾಯಿಲ್ ಪಟೇಲ್, ಆರೋಗ್ಯ ಅಧಿಕಾರಿ ಡಾ.ಧಮ್ಮರತ್ನ ಹಾಗೂ ಜನವಾಡ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಗಳು ಶಿಕ್ಷಕರು ಹಾಗೂ ಗ್ರಾಮಸ್ಥರು ಸೇರಿದಂತೆ ಹಲವರು ಭಾಗಿಯಾಗಿದ್ದರು