Homeಸುದ್ದಿಗಳುಉದ್ಯೋಗ ಖಾತರಿ ಕೆಲಸ ಕೇಳಿದರೆ ಆವಾಜ್ ಹಾಕಿದ ಯೋಜನಾ ಅಧಿಕಾರಿ...

ಉದ್ಯೋಗ ಖಾತರಿ ಕೆಲಸ ಕೇಳಿದರೆ ಆವಾಜ್ ಹಾಕಿದ ಯೋಜನಾ ಅಧಿಕಾರಿ…

ಬೀದರ – ಕೋರೋನಾ ಆರ್ಭಟ ಹಿನ್ನೆಲೆಯಲ್ಲಿ ಹಲವು ಜನರು ತನ್ನ ಕೆಲಸವನ್ನು ಕಳೆದುಕೊಂಡು ಕುಟುಂಬ ಜೊತೆ ಊರಿಗೆ ಸೇರಿದರು.ಮನೆ ಕುಟುಂಬ ಹೇಗೆ ನಡೆಸಬೇಕು ಎಂದು ಚಿಂತೆಯಲ್ಲಿ ಇರುವ ಅಲಿಯಾಂಬರ ಗ್ರಾಮಸ್ಥರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೇಳಿ ಅಧಿಕಾರಿಯಿಂದ ಬೈಸಿಕೊಂಡ ಪ್ರಸಂಗ ನಡೆದಿದೆ.

ಜಿಲ್ಲೆಯ ಅಲಿಯಾಂಬರ ಗ್ರಾಮಸ್ಥರು ಉದ್ಯೋಗ ಕೇಳಿದವರು, ಜಿಲ್ಲಾ ಪಂಚಾಯತ ಅಧಿಕಾರಿ ಶರತ್ ಗ್ರಾಮಸ್ಥರಿಗೆ ಆವಾಜ್ ಹಾಕಿದವರು…

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಗ್ರಾಮ ಪಂಚಾಯತ ನಲ್ಲಿ ಉದ್ಯೋಗ ಖಾತ್ರಿ ಯೋಜನೆ ತಂದಿದ್ದ, ಗ್ರಾಮಗಳು ಅಭಿವೃದ್ಧಿ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಯೋಜನೆ ತಂದಿದ್ದಾರೆ. ಕೇಂದ್ರ ಸರಕಾರದ ಬಜೆಟ್ ನಲ್ಲಿ ಒಂದು ಗ್ರಾಮ ಪಂಚಾಯತಗೆ ಒಂದು ವರ್ಷಕ್ಕೆ ಒಂದು ಕೋಟಿ ರೂಪಾಯಿ ಅನುದಾನ ನೀಡುತ್ತಾ ಇದೆ.

ಉದ್ಯೋಗಾಕಾಂಕ್ಷಿ ಯುವಕ

ಆದರೆ ಬೀದರ್ ತಾಲ್ಲೂಕಿನ ಅಲಿಯಾಂಬರ ಗ್ರಾಮ ಪಂಚಾಯತ ನಲ್ಲಿ ಕೆಲಸ ಕೇಳಿಕೊಂಡು ಹೋಗಿದ್ದ ಗ್ರಾಮಸ್ಥರಿಗೆ ಬೀದರ್ ಜಿಲ್ಲಾ ಪಂಚಾಯತ ಉದ್ಯೋಗ ಖಾತರಿ ಯೋಜನೆ ಅಧಿಕಾರಿ ಶರತ್ ಆವಾಜ್ ಹಾಕಿದ್ದಾರೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಯೋಜನಾ ಅಧಿಕಾರಿ ಶರತ್, ನಿಮ್ಮನ್ನು ಬಡಿತೆನ ನೋಡ ಯಾವನ್ಲೆ ನೀನು ಕೆಲಸ ಕೆಳುವದಕ್ಕೆ ಬಂದಿದ್ದೀಯಾ ನಾವು ಕೆಲಸ ಕೊಟ್ಟರೆ ಮಾಡಬೇಕು ಮಗನೆ ಇಲ್ಲಾಂದರೆ ಸುಮ್ಮನ ಇರಬೇಕು ಅಂತಹ ಹೇಳಿದ್ದಾರೆ ಎಂದು ಗ್ರಾಮದ ಯುವಕ ಯೋಜನಾ ಅಧಿಕಾರಿ ಮೇಲೆ ಗಂಭೀರ ಆರೋಪ ಮಾಡಿದರು.

ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group