spot_img
spot_img

ಸಂವಿಧಾನ ದಿನ ಆಚರಣೆ

Must Read

spot_img
- Advertisement -

ಸವದತ್ತಿ: ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸಂವಿಧಾನ ದಿನ ಆಚರಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿಯವರು ಸಂವಿಧಾನ ದಿನದ ಅಂಗವಾಗಿ ಸಂವಿಧಾನದ ಮಹತ್ವದ ಕುರಿತು ತಿಳಿ ಹೇಳಿದರು.

ನಮ್ಮ ಸಂವಿಧಾನ ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನ ಹಾಗೂ ನಮಗೆ ಸದಾ ಮಾರ್ಗದರ್ಶಿ.ಇದನ್ನು ಗೌರವಿಸಬೇಕಾದದ್ದು ಪ್ರತಿ ಭಾರತೀಯನ ಕರ್ತವ್ಯ. ನಮ್ಮ ಸಂವಿಧಾನದ ಪೀಠಿಕೆಯು ನಮ್ಮ ಭವ್ಯ ಪರಂಪರೆಯ ಕೈಗನ್ನಡಿ ಎಂದು ಹೇಳಿ, ಸಂವಿಧಾನದ ಪೀಠಿಕೆಯನ್ನು ಓದಿ ಎಲ್ಲರಿಂದ ಹೇಳಿಸಿದರು.

- Advertisement -

ಸದರೀ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕಾ ಘಟಕದ ಅಧ್ಯಕ್ಷರಾದ ಹೆಚ್.ಆರ್.ಪೆಟ್ಲೂರ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ವೈ.ಎಂ.ಶಿಂಧೆ, ಮ್ಯಾನೇಜರ್ ಆದ ಮಕಾನದಾರ, ಸುಪರಿಡೆಂಟ್ ಹಿರೇಮಠ, ಶಿಕ್ಷಣ ಸಂಯೋಜಕರಾದ ಕಬೀರ ಡಂಗಿ ಹಾಗೂ ಕಚೇರಿ ಸಿಬ್ಬಂದಿ ಕೊಟ್ರೇಶ, ಬಾಬಾಜಾನ ಮಾಳಗಿ, ಕುಮಾರಿ ವಿದ್ಯಾ, ಪ್ರಶಾಂತ. ಮೋಟೇಕರ, ನೇಗಲಿ, ಮಾವುತ, ಸಿ.ಆರ್.ಪಿಯವರಾದ ವೀರೇಶ.ಚಂದರಗಿ, ಹೆಚ್.ಎಲ್.ನದಾಫ, ಪಾಟೀಲ ಹಾಗೂ ಇನ್ನಿತರರು ಹಾಜರಿದ್ದರು.

- Advertisement -
- Advertisement -

Latest News

 ದಿ. 9 ರಂದು ಕಪ್ಪತಗುಡ್ಡದಲ್ಲಿ 9 ನೇ “ಮಾಸಿಕ ಚಾರಣ ಸಂಭ್ರಮ ಹಾಗೂ ಸಸ್ಯಾನುಭಾವ”

ಗದಗ - ಚಾರಣ ಪ್ರಿಯರು ಮತ್ತು ಸಸ್ಯ ಪ್ರಬೇಧಗಳ ಅಧ್ಯಯನ ನಡೆಸಲು ಕ್ಷೇತ್ರಭೇಟಿ ನೀಡಬಯಸುವ ಸಂಶೋಧನಾಕಾರರಿಗೆ, ಅಧ್ಯಾಪಕರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ಆಯುರ್ವೇದ ಹಾಗೂ ಪಾರಂಪರಿಕ ವೈದ್ಯರಿಗೆ,...
- Advertisement -

More Articles Like This

- Advertisement -
close
error: Content is protected !!
Join WhatsApp Group