Homeಸುದ್ದಿಗಳುಕೊರೋನಾ ವಾರಿಯರ್ಸ್‌ ಸನ್ಮಾನ

ಕೊರೋನಾ ವಾರಿಯರ್ಸ್‌ ಸನ್ಮಾನ

ಚಿಕ್ಕೋಡಿ – ಕೊರೋನಾ ನಿಯಂತ್ರಣಕ್ಕಾಗಿ ತಮ್ಮ ಪ್ರಾಣದ ಹಂಗುದೊರೆದು ಕರ್ತವ್ಯ ನಿರ್ವಹಿಸಿದ ವೈದ್ಯರು, ಆಶಾ ಕಾರ್ಯಕರ್ತರು ಹಾಗೂ ಪಂಚಾಯತ ಸಿಬ್ಬಂದಿಯ ಕಾರ್ಯ ಶ್ಲಾಘನೀಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ತಾಲೂಕಿನ ಕರೋಶಿ ಗ್ರಾಮ ಪಂಚಾಯತ ಸಭಾಭವನದಲ್ಲಿ ಕರೋಶಿ, ನಾಗರಮುನ್ನೋಳಿ ಹಾಗೂ ಕಬ್ಬೂರ ಗ್ರಾಮಗಳ ಕೊರೋನಾ ವಾರಿಯರ್ಸ್ ಗಳಿಗೆ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.
ಈ ಕೊರೋನಾ ವಾರಿಯರ್ಸ್ ಗಳ ನಿಸ್ವಾರ್ಥ ಸೇವೆ ಎಂದೂ ಮರೆಯಲಾಗದು ಎಂದರು.

ಮಾಜಿ ಸಚಿವ ವೀರಕುಮಾರ ಪಾಟೀಲ, ಅಪ್ಪಾಸಾಬ ಕುಲಗೂಡೆ, ಕಾಂಗ್ರೆಸ್ ಯುವಘಟಕದ ಜಿಲ್ಲಾಧ್ಯಕ್ಷ ಯಲ್ಲಪ್ಪಾ ಶಿಂಗೆ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮುಂತಾದವರು ಉಪಸ್ಥಿತರಿದ್ದರು

RELATED ARTICLES

Most Popular

error: Content is protected !!
Join WhatsApp Group