Homeಸುದ್ದಿಗಳುಢೋಂಗಿ ಜಾತ್ಯತೀತರ ನಡುವೆ ಅಸ್ಥಿರಗೊಳ್ಳುತ್ತಿರುವ ಹಿಂದೂಗಳು, ಹಿಂದುತ್ವ

ಢೋಂಗಿ ಜಾತ್ಯತೀತರ ನಡುವೆ ಅಸ್ಥಿರಗೊಳ್ಳುತ್ತಿರುವ ಹಿಂದೂಗಳು, ಹಿಂದುತ್ವ

ಇತ್ತೀಚೆಗೆ ಸಿದ್ಧರಾಮಯ್ಯ, ಕುಮಾರಸ್ವಾಮಿ ಸೇರಿದಂತೆ ಹಲವು ವಿಕ್ಷಿಪ್ತ ಮನಸಿನ ರಾಜಕಾರಣಿಗಳು ಹಿಂದೂ ಧರ್ಮ, ಹಿಂದುತ್ವದ ಬಗ್ಗೆ ತಮ್ಮ ನಾಲಗೆಯನ್ನು ಹರಿಯಬಿಡುತ್ತಿರುವುದು ಹೆಚ್ಚಾಗುತ್ತಿದ್ದು ಇನ್ನೂ ಹಿಂದೂಗಳು ಎಚ್ಚತ್ತುಗೊಳ್ಳದೇ ಇರುವುದು ಹಿಂದೂಗಳಿಗೆ ಅಪಾಯಕಾರಿಯಾಗಿ ಪರಿಣಮಿಸಲಿದೆ.

ಇವರಿಗೆ ಹಿಂದೂಗಳನ್ನು ಕಂಡರೆ, ಹಿಂದೂ ಧರ್ಮವನ್ನು ಕಂಡರೆ ಯಾಕೆ ಇಷ್ಟು ಉರಿ ಎಂಬ ಪ್ರಶ್ನೆ ಬಂದಾಗ ಸಿಗುವ ಉತ್ತರವೆಂದರೆ ಕೇವಲ ಅಧಿಕಾರಕ್ಕಾಗಿ ಎಂಬುದು. ವಿಚಿತ್ರವೆಂದರೆ ಇವರು ಅಧಿಕಾರ ಹಿಡಿಯುವಲ್ಲಿ ಹೆಚ್ಚಿನ ಪಾಲು ಹಿಂದೂಗಳದೂ ಇದೆಯೆಂಬುದನ್ನು ಈ ನಾಯಕರು (?) ಮರೆತಿದ್ದಾರೆ ಎನ್ನುವುದಕ್ಕಿಂತಲೂ ಇವರ ಹುಚ್ಚುತನದ, ನಿರಾಧಾರ ಟೀಕೆಗಳನ್ನು ಕೇಳಿಯೂ ಹಿಂದೂಗಳು ಇವರನ್ನೇ ಬೆಂಬಲಿಸಿ ಮತಹಾಕುತ್ತಾರಲ್ಲ ಎಂಬುದು ವಿಚಿತ್ರವಾದದ್ದು. ಮಾತೆತ್ತಿದರೆ ಈ ಕಾಂಗಿಗಳು, ದಳಪತಿಗಳು ಮನುವಾದ ಎನ್ನುತ್ತಾರೆ. ಆದರೆ ಈಗೆಲ್ಲಿದೆ ಮನುವಾದ ? ಅಸ್ಪೃಶ್ಯತೆ ಎನ್ನುವುದೇ ಕಣ್ಮರೆಯಾಗಿದೆ. ಎಲ್ಲೋ ಹಳೆಯ ಪೀಳಿಗೆಯ ವಯಸ್ಸಾದ ಜನರು ಇದ್ದಲ್ಲಿ ಮಡಿ ಮೈಲಿಗೆ ಅಂತ ಸ್ವಲ್ಪ ನಖರಾ ಕೆಲವರದು ಇರಬಹುದು ಅವರ ಮಕ್ಕಳು ಮೊಮ್ಮಕ್ಕಳೇ ಈ ಮಡಿವಂತಿಕೆಗೆ ಬೈ ಹೇಳಿ ಎಷ್ಟೋ ಕಾಲವಾಗಿದೆ. ಇನ್ನು ಇವರ ಇನ್ನೊಂದು ಮಂತ್ರ ‘ಜಾತ್ಯತೀತತೆ !’

ಎಷ್ಟು ವಿಚಿತ್ರವೆಂದರೆ ತಮ್ಮದು ಜಾತ್ಯತೀತ ‘ ದಳ’ ಎನ್ನುವ ಕುಮಾರಸ್ವಾಮಿಯವರು ಬಾಯಿ ತೆರೆದರೆ ಸಾಕು ಜಾತಿಗೊಂದು ಮುತ್ತು ಉದುರುತ್ತವೆ. ಮೊನ್ನೆ ಅವರು ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಮುಖ್ಯಮಂತ್ರಿಯಾಗುತ್ತಾರೆ ಎಂದು ಅಣಿಮುತ್ತು ಉದುರಿಸಿದರು. ಎಂಥ ಆತ್ಮವಂಚನೆ ! ಅಲ್ರೀ, ಕುಮಾರಸ್ವಾಮಿಯವರೆ, ನೀವು ಅಧಿಕಾರಕ್ಕೆ ಬಂದರೆ ದಲಿತರನ್ನು, ಮುಸ್ಲಿಮರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಭೋಂಗು ಬಿಟ್ಟು ಜಾತಿಯ ಮಾತು ಆಡಬಹುದು. ಇನ್ನೂ ಅವರು ಏನೂ ಹೇಳೇ ಇಲ್ಲ ಈಗಲೇ ನಿಮಗೆ ಬ್ರಾಹ್ಮಣರ ಕಂಡರೆ ಉರಿ ಯಾಕೆ ? ಅಷ್ಟಲ್ಲದೆ ಅದೇನೇನೋ ಪೇಶ್ವೆ ಬ್ರಾಹ್ಮಣರಂತೆ.. ಸುಡುಗಾಡು ಯಾರಿಗೂ ಅರ್ಥವಾಗದ ಬ್ರಾಹ್ಮಣ್ಯವನ್ನು ತಂದಿಟ್ಟು ಎಲ್ಲರ ಕಣ್ಣಲ್ಲಿ ಚುಕ್ಕೆಗಳನ್ನು ಮೂಡಿಸಿದಿರಲ್ಲ ಮಾರಾಯರೆ ? ಇದ್ಯಾವ ಸೀಮೆಯ ಜಾತ್ಯತೀತತೆ ?

ಇಂಥವರಿಗೆ ಬ್ರಾಹ್ಮಣರು ಮತ ಹಾಕಬೇಕಾ ? ಹೋಗಲಿ, ಜಾತ್ಯತೀತ ತತ್ವ ನಂಬಿದವರಾದರೂ ಮತ ಯಾಕೆ ಹಾಕಬೇಕು ? ಎಲ್ಲರೂ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ.

ಇನ್ನು ಸಿದ್ಧರಾಮಯ್ಯನವರ ಉದ್ಧಟತನ ಹೇಗಿದೆಯೆಂದರೆ, ತಾನು ಹಿಂದೂ ಅಂತೆ (ಹಿಂದೂಗಳ ಮತ ಬೇಕಲ್ಲ!) ಆದರೆ ಹಿಂದುತ್ವದ ವಿರೋಧಿಯಂತೆ (ಲದ್ದಿ ಜೀವಿಗಳ ಮತ ಬೇಕಲ್ಲ!) ಇದು ಹೇಗಿದೆಯೆಂದರೆ, ಈ ಮನೆಯಲ್ಲಿ ಹುಟ್ಟಿದ ನನಗೆ ಮನೆ ಬೇಕು, ಮನೆಯ ಆಚಾರ ವಿಚಾರ ಬೇಡ ಅಂದಂತಾಯಿತು.

ಇವರು, ಮನುವಾದ ಮತ್ತು ಹಿಂದುತ್ವವು ಕೊಲೆ, ಹಿಂಸೆ ಮತ್ತು ತಾರತಮ್ಯಕ್ಕೆ ಪ್ರೋತ್ಸಾಹ ಕೊಡುತ್ತವೆ ಹೀಗಾಗಿ ನಾನು ಹಿಂದುತ್ವದ ವಿರೋಧಿಯೇ ಹೊರತು ಹಿಂದೂ ಧರ್ಮದ ವಿರೋಧಿ ಅಲ್ಲ ಅನ್ನುತ್ತಾರೆ! ಅಲ್ಲಾ ಸ್ವಾಮಿ, ಹಿಂದೂ ಧರ್ಮ ಬಿಟ್ಟು ಹಿಂದುತ್ವ ಇದೆಯೆ ? ಇದೆಂಥ ಪಾಖಂಡಿತನ ನಿಮ್ಮದು? ಯಾರಿಗೆ ಕಿವಿಗೆ ಹೂ ಇಡಲು ಹೊರಟಿದ್ದೀರಿ ಸಿದ್ದರಾಮಯ್ಯ? ಮನುಷ್ಯರಿದ್ದಾಗ ಮನುಷ್ಯತ್ವ ಇರುತ್ತದೆ, ಮುಸ್ಲಿಮರಲ್ಲಿ ಇಸ್ಲಾಮ್ ಇರುತ್ತದೆ, ಜೈನರಲ್ಲಿ ಜಿನತತ್ವ ಇರುತ್ತದೆ, ಮೃಗಗಳಲ್ಲಿ ಮೃಗತ್ವ ಇರುತ್ತದೆ ಹಾಗೆ ಹಿಂದೂ ಧರ್ಮದಲ್ಲಿ ಹಿಂದುತ್ವ ಇರುತ್ತದೆ. ಹಿಂದುತ್ವವನ್ನು ಪಾಲಿಸದಿದ್ದರೆ ಆತನನ್ನು ಹಿಂದೂ ಎನ್ನಲಾದೀತೆ?

ಈ ಮಹಾನುಭಾವ ಇನ್ನೂ ಹೇಳುತ್ತಾರೆ; ಯಾವುದೇ ಧರ್ಮದಲ್ಲಿ ಕೊಲೆ, ಹಿಂಸೆಗೆ ಪ್ರೋತ್ಸಾಹ ಇಲ್ಲ ಆದರೆ, ಮನುವಾದ ಮತ್ತು ಹಿಂದುತ್ವದಲ್ಲಿ ಇದೆಯಂತೆ ! ಸ್ವಾಮಿ ಸಿದ್ಧರಾಮಯ್ಯನವರೆ, ನಿಮ್ಮ ಅಧಿಕಾರ ದಾಹ, ತುಷ್ಟೀಕರಣ ರಾಜಕೀಯ, ಭಂಡ ವಾದವನ್ನು ಬಿಟ್ಟು ಈಚೆಗೆ ಬಂದು ಸ್ವಲ್ಪ ಎದೆತಟ್ಟಿಕೊಂಡು ಹೇಳಿ, ಹಿಂದೂ ಧರ್ಮದಲ್ಲಿ ಕೊಲೆ, ಹಿಂಸೆಗೆ ಪ್ರೋತ್ಸಾಹ ಇದೆ….ಬೇರೆ ಧರ್ಮಗಳಲ್ಲಿ ( ನೀವು ಪ್ರೀತಿಸುವ ) ಇದಕ್ಕೆಲ್ಲ ಪ್ರೋತ್ಸಾಹ ಇಲ್ಲ ಅಂತ. ಮನಸ್ಸಾಕ್ಷಿಯಾಗಿ ಹೇಳಿ…

ಜಗತ್ತಿನಲ್ಲಿ ಸರ್ವೇಜನಾಃ ಸುಖಿನೋಭವಂತು ಅಂತ ಹೇಳಿದ್ದು ಹಿಂದೂ ಧರ್ಮ ಒಂದೇ. ಮನುವಾದದಲ್ಲಿ ತಾರತಮ್ಯ ಇತ್ತು… ಈಗ ಮನುವಾದವೇ ಇಲ್ಲ. ಆದರೆ ಕೇವಲ ಒಂದು ವರ್ಗದ ಮತಗಳಿಗೋಸ್ಕರ ಹಿಂದೂ ಧರ್ಮದಲ್ಲಿ ಇಲ್ಲದ ಹಿಂಸೆಯನ್ನು ಇದೆಯೆಂದು ಹೇಳುತ್ತ, ಹಿಂಸೆಯೇ ಧರ್ಮವಾಗಿರುವ ಒಂದು ವರ್ಗದ ಕಾಲು ನೆಕ್ಕಲು ಕೂಡ (ಅದೂ ಕೇವಲ ಅಧಿಕಾರಕ್ಕಾಗಿ) ಮನಸ್ಸಾಕ್ಷಿಗೆ ವಿರುದ್ಧವಾಗಿ ಇಂಥ ಹೇಳಿಕೆ ನೀಡುತ್ತೀರಲ್ಲ… ನಿಮಗೆ ಧಿಕ್ಕಾರ!

ಇವೆರಡೂ ವ್ಯಕ್ತಿತ್ವಗಳು ಅತ್ಯಂತ ಅಧಿಕಾರದಾಹಿ ವ್ಯಕ್ತಿತ್ವಗಳು. ಆಧಿಕಾರಕ್ಕಾಗಿ ಸಮಾಜ ಒಡೆಯಲು ಹೇಸದ ವ್ಯಕ್ತಿತ್ವಗಳು (ಲಿಂಗಾಯತ, ವೀರಶೈವ ಪ್ರಕರಣದಲ್ಲಿ ನೋಡಿದ್ದೀವಲ್ಲ) ಈ ಢೋಂಗಿ ಜಾತ್ಯತೀತವಾದಿಗಳ ನಡುವೆ ಹಿಂದೂಗಳು, ಹಿಂದುತ್ವ ಅಸ್ಥಿರಗೊಳ್ಳುತ್ತವೆ! ಇತಿಹಾಸದಲ್ಲಿ ಅಧಿಕಾರಕ್ಕಾಗಿ ವ್ಯಕ್ತಿಗಳ ಕೊಲೆ ಮಾಡಿದ್ದನ್ನು ಕೇಳಿದ್ದೇವೆ ಆದರೆ ಈ ಇಬ್ಬರೂ ಅಧಿಕಾರಕ್ಕಾಗಿ ಒಂದು ಧರ್ಮವನ್ನೇ (ಅದೂ ಅದೇ ಧರ್ಮದಲ್ಲಿ ಹುಟ್ಟಿ!) ನಾಶ ಮಾಡುವ ಪಣ ತೊಟ್ಟಂತೆ ಕಾಣುತ್ತದೆ. ಅತ್ಯಂತ ವಿಪರ್ಯಾಸಕರವೆಂದರೆ ಇಂಥವರಿಗೂ ಸಾವಿರಾರು ಜನ ಬೆಂಬಲಿಗರು ಇದ್ದದ್ದು. ಇವರು ಕೇವಲ ರಾಜಕಾರಣ ಮಾಡಿಕೊಂಡಿದ್ದರೆ ಬೆಂಬಲಿಸಬಹುದಿತ್ತು ಆದರೆ ಧರ್ಮ ದ್ರೋಹದ ರಾಜಕಾರಣ ಮಾಡುವವರನ್ನು ಬೆಂಬಲಿಸುವವರೂ ಧರ್ಮ ದ್ರೋಹಿಗಳೇ. ಇವರ ಬೆಂಬಲಿಗರು ತಮ್ಮ ಆತ್ಮವನ್ನು ಮುಟ್ಟಿ ನೋಡಿಕೊಳ್ಳಬೇಕು.

ಇವರು ಕೇವಲ ಈಗಿನ ಮಟ್ಟಿಗೆ ಅಧಿಕಾರ ಅನುಭವಿಸಿ ಮರೆಯಾಗುತ್ತಾರೆ ಆದರೆ ಇವರು ಹಿಂದೂ ಧರ್ಮಕ್ಕೆ ನೀಡಿ ಹೋದ ಪೆಟ್ಟು ಅಜರಾಮರವಾಗಿರುತ್ತದೆ. ನಮ್ಮ ಮುಂದಿನ ಎಲ್ಲ ಪೀಳಿಗೆಗಳಿಗೂ ಕಂಟಕವಾಗಿರುತ್ತದೆ ಎಂಬುದನ್ನು ಹಿಂದೂಗಳು ಅರಿತುಕೊಳ್ಳಬೇಕು. ಈ ಇಬ್ಬರನ್ನೂ ಅಲ್ಲದೆ ಹಿಂದೂ ಜಾತ್ಯತೀತತೆಯ ಹೆಸರಿನಲ್ಲಿ ಜಾತೀಯತೆ ಮಾಡುವ ಎಲ್ಲ ಹಿಂದೂ ದ್ರೋಹಿಗಳನ್ನು ಧಿಕ್ಕರಿಸಿದರೆ ಹಿಂದೂ ಧರ್ಮ ಉಳಿಯುತ್ತದೆ, ಭಾರತ ಭಾರತವಾಗಿ ಉಳಿಯುತ್ತದೆ… ಎಚ್ಚರಿಕೆ!


ಉಮೇಶ ಬೆಳಕೂಡ, ಮೂಡಲಗಿ

RELATED ARTICLES

Most Popular

error: Content is protected !!
Join WhatsApp Group