Homeಸುದ್ದಿಗಳುಸಾಹಿತಿ ವೈ ಬಿ ಕಡಕೋಳ ರಿಗೆ ಡಾಕ್ಟರೇಟ್

ಸಾಹಿತಿ ವೈ ಬಿ ಕಡಕೋಳ ರಿಗೆ ಡಾಕ್ಟರೇಟ್

ಸವದತ್ತಿ:ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವೈ ಬಿ ಕಡಕೋಳ ರಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಡಾ. ಮಹೇಶ ಗಾಜಪ್ಪನವರ ಇವರ ಮಾರ್ಗದರ್ಶನ ದಲ್ಲಿ ತಲ್ಲೂರು ರಾಯನಗೌಡರು ಸಮಗ್ರ ಅಧ್ಯಯನ ವಿಷಯವಾಗಿ ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದೆ.

ಶಿಕ್ಷಕ ಸಾಹಿತಿಗಳಾದ ಇವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಗಳಾಗಿ 40 ಕೃತಿಗಳನ್ನು ಪ್ರಕಟಿಸಿದ್ದು. ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಮುನವಳ್ಳಿ ಒಂದು ಸಾಂಸ್ಕೃತಿಕ ಅಧ್ಯಯನ ವಿಷಯದಲ್ಲಿ ಎಂ. ಫಿಲ್ ಕೂಡ ಮಾಡಿರುವುದು ವಿಶೇಷ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಂಗಲಾ ಮೆಟಗುಡ್ಡ ಹಾಗೂ ಪ್ರಧಾನ ಕಾರ್ಯದರ್ಶಿ ಗಳಾದ ಎಂ ವೈ ಮೆಣಸಿನಕಾಯಿ ಶಿಕ್ಷಕರಾದ ವೈ ಬಿ ಕಡಕೋಳ ಇವರ ಸಾಧನೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶುಭಾಶಯ ತಿಳಿಸಿರುವರು

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group