Homeಸುದ್ದಿಗಳುಭಾಲ್ಕಿ ಜನರ ಮಾನ ತೆಗೆದ ಈಶ್ವರ ಖಂಡ್ರೆ- ಪ್ರಕಾಶ ಖಂಡ್ರೆ ಆಕ್ರೋಶ

ಭಾಲ್ಕಿ ಜನರ ಮಾನ ತೆಗೆದ ಈಶ್ವರ ಖಂಡ್ರೆ- ಪ್ರಕಾಶ ಖಂಡ್ರೆ ಆಕ್ರೋಶ

ಬೀದರ– ಸದನದಲ್ಲಿ ಭಾಲ್ಕಿ ಜನತೆಯ ಮಾನ ಹರಾಜು ಹಾಕಿದ್ದಾರೆ ಎಂದು ರಾಜ್ಯ ಕೆಪಿಸಿಸಿ ರಾಜ್ಯ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಚಿತ್ರದ  ಕೊರಳಿಗೆ ಚಪ್ಪಲಿ ಹಾರ ಹಾಕಿ ಪ್ರಕಾಶ ಖಂಡ್ರೆ ಪ್ರತಿಭಟನೆ ಮಾಡಿದರು.

ಸದನದಲ್ಲಿ ಈಶ್ವರ ಖಂಡ್ರೆ ಕಾಲ ಹರಣ ಮಾಡಿದ್ದಲ್ಲದೆ ಸ್ಪೀಕರ್ ಅವರಿಂದ ಹೊರಗೆ ಹಾಕಿಸಿಕೊಳ್ಳುವ ಮಾತು ಬರುವಂತೆ ಮಾಡಿದ ಈಶ್ವರ ಖಂಡ್ರೆಯವರಿಂದಾಗಿ ಭಾಲ್ಕಿ ಜನತೆಯ ಮಾನ ಹರಾಜಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರಕಾಶ ಅವರು, ಐವತ್ತು ರೂಪಾಯಿ ಸೀರೆ ಕೊಟ್ಟು ನಮ್ಮ ಮನೆ ಹೆಣ್ಣು ಮಕ್ಕಳ ಮರ್ಯಾದೆ ತೆಗೆಯುತ್ತೀರಿ ನೀವು ಎಂದರು.

ಭಾಲ್ಕಿಯ ಜನರಿಗೆ ಎಲ್ಲ ಅರ್ಥವಾಗುತ್ತದೆ ನಿಮ್ಮ ಯಾವ ನಾಟಕಗಳೂ ಇಲ್ಲಿ ನಡೆಯುವುದಿಲ್ಲ ಎಂದು ಪ್ರಕಾಶ ಖಂಡ್ರೆ ಕುಟುಕಿದರು.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group