ಸೇವಾ ನಿವೃತ್ತ ಯೋಧ ಗಣಪತಿ ರಡರಟ್ಟಿಗೆ ಸ್ವಾಗತ ಸಮಾರಂಭ

Must Read

ಮೂಡಲಗಿ: ಭಾರತೀಯ ಸೇನೆಯಲ್ಲಿ ಸುಧೀರ್ಘ ೨೨ ವರ್ಷಗಳ ಕಾಲ ಸೇವೆ ಸಲ್ಲಿ ಸೇವಾ ನಿವೃತ್ತಿ ಹೊಂದಿ ಇಂದು ಸ್ವ-ಗ್ರಾಮ ಮೂಡಲಗಿ-ಶಿವಾಪೂರ(ಹ) ಗ್ರಾಮಕ್ಕೆ ಆಗಮಿಸುತ್ತಿರುವ ಸೇವಾ ನಿವೃತ್ತ ಯೋಧ ಗಣಪತಿ ಮಲ್ಲಪ್ಪ ರಡರಟ್ಟಿ ಅವರಿಗೆ ಸ್ವಾಗತ ಸಮಾರಂಭ ಮಾ.೩ ರಂದು ಮುಂಜಾನೆ ೧೧ ಗಂಟೆಗೆ ಮೂಡಲಗಿ-ಶಿವಾಪೂರ ಗ್ರಾಮಸ್ಥರಿಂದ ಜರುಗಲಿದೆ.

ಮೂಡಲಗಿ ಪೊಲೀಸ್ ಠಾಣೆ ಹತ್ತಿರದಿಂದ ತೆರೆದ ಅಲಕೃಂತ ವಾಹನದಲ್ಲಿ ಮೆರವಣಿಗೆ ಜರುಗುವುದು, ಮೆರವಣಿಗೆಯು ಪಟ್ಟಣದ ಕಲ್ಮೇಶ್ವರ ವೃತ್ತ, ಸಂಗಪ್ಪಣ್ಣ ವೃತ್ತ, ಶ್ರೀ ಶಿವಬೋಧರಂಗ ಮಠದ ರಸ್ತೆ ಮೂಲಕ ರಂಗಾಪೂರ ರಸ್ತೆಯ ರೇಣುಕಾ ನಗರದಲ್ಲಿರುವ ಸೇವಾ ನಿವೃತ್ತ ಯೋಧ ಗಣಪತಿ ಮಲ್ಲಪ್ಪ ರಡರಟ್ಟಿ ಮನೆ ಹತ್ತಿರ ಸಮಾವೇಶಗೊಳ್ಳುವುದು.

ಮೆರವಣಿಗೆಯಲ್ಲಿ ಸೈನಿಕ ತರಬೇತಿ ಕೇಂದ್ರ ವಿಧ್ಯಾರ್ಥಿಗಳು ಮಾಜಿ ಸೈನಿಕರು ಹಾಗೂ ಅಭಿಮಾನಿಗಳ ಭಾಗವಹಿಸುವರು.
ಸ್ವಾಗತ ಸಮಾರಂಭದ ಸಾನ್ನಿಧ್ಯವನ್ನು ಮೂಡಲಗಿಯ ಶ್ರೀ ದತ್ತಾತ್ರಯಬೋಧ ಮಹಾಸ್ವಾಮಿಜಿ, ಶಿವಾಪೂರದ ಶ್ರೀ ಅಡವಿಸಿದ್ರಾಮ ಮಹಾಸ್ವಾಮಿಜಿ, ಮುನ್ಯಾಳ-ರಂಗಾಪೂರದ ಡಾ. ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ, ಶಿರೋಳದ ಬಸವರಾಜ ಮಹಾಲಿಂಗಪೂರ ವಹಿಸುವರು.

ಬೆಮ್ಯುಲ್ ಅಧ್ಯಕ್ಷ ಹಾಗೂ ಬಾಲಚಂದ್ರ ಲ. ಜಾರಕಿಹೊಳಿ ಉದ್ಘಾಟಿಸುವರು, ಶಿವಾಪೂರ ಗ್ರಾ.ಪಂ ಅಧ್ಯಕ್ಷೆ ಯಮನವ್ವ ಹಾ.ಗಿಡ್ಡವಗೋಳ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ ಶಿವಾನಂದ ಬಬಲಿ, ಬಿಇಒ ಅಜೀತ ಮನ್ನಿಕೇರಿ, ತಾ.ಪಂ ಇಒ ಎಫ್.ಜಿ. ಚಿನನ್ನವರ ಸಿಪಿಐ ಶ್ರೀಶೈಲ್ ಬ್ಯಾಕೂಡ, ಪಿಎಸ್‌ಐ ಗಳಾದ ರಾಜು ಪೂಜಾರಿ, ಆನಂದ ಬಿ, ಶಿವಾಪೂರ ಮುಖಂಡ ಶಿವನಗೌಡ ಶಂ. ಪಾಟೀಲ, ಸಾಹಿತಿ ಬಾಲಶೇಖರ ಬಂದಿ, ಗ್ರಾ.ಪಂ ಉಪಾಧ್ಯಕ್ಷ ಮಲ್ಲಪ್ಪ ಮ.ಜುಂಜರವಾಡ, ಮೂಡಲಗಿ ಪುರಸಭೆ ಅಧ್ಯಕ್ಷೆ ಖುರ್ಷಾದ ನದಾಫ್, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಲಕ್ಷ್ಮಣ ಅಡಿಹುಡಿ, ಕರುನಾಡು ಸೈನಿಕ ತರಬೇತಿ ಕೇಂದ್ರದ ಸವಿತಾ ತುಕ್ಕನ್ನವರ, ಬೆಳಗಾವಿ ಮಾಜಿ ಸೈನಿಕರ ಸಂಘಟನೆಗಳ ಮಹಾ ಒಕ್ಕೂಟದ ಜಿಲ್ಲಾ ಅಧ್ಯಕ್ಷ್ಷ ಜಗದಯ್ಯಾ ಪೂಜೇರಿ, ಅಖಿಲ ಕರ್ನಾಟಕ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ಮೂಡಲಗಿ ತಾಲೂಕದ ಗೌರವಾಧ್ಯಕ್ಷ ಶಿವಪ್ಪ ಮಾಲಗಾರ, ಅಧ್ಯಕ್ಷ ಚರಂತಯ್ಯಾ ಮಳ್ಳಿಮಠ ಭಾಗವಹಿಸುವರು.

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...

More Articles Like This

error: Content is protected !!
Join WhatsApp Group