Homeಸುದ್ದಿಗಳುಡಾ. ಜಗದೀಶ ಭೈರಮಟ್ಟಿ ಪ್ರಾಚಾರ್ಯರಿಗೆ ಗೌರವ ಸನ್ಮಾನ

ಡಾ. ಜಗದೀಶ ಭೈರಮಟ್ಟಿ ಪ್ರಾಚಾರ್ಯರಿಗೆ ಗೌರವ ಸನ್ಮಾನ

ಬಾಗಲಕೋಟೆ: ತಾಲೂಕಿನ ಬೇವೂರ್ ಗ್ರಾಮದ ಆದರ್ಶ ವಿದ್ಯಾವರ್ಧಕ ಸಂಘದ ವತಿಯಿಂದ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜಗದೀಶ ಗು. ಬೈರಮಟ್ಟಿಯವರಿಗೆ ಸನ್ಮಾನ ಮಾಡಲಾಯಿತು.

೭೮ ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೇವೂರಿನ ಆದರ್ಶ ವಿದ್ಯಾವರ್ಧಕ ಸಂಘದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಜಿ. ಜಿ. ಮಾಗನೂರ, ರತನಕುಮಾರ ವ್ಶೆಜಾಪೂರ ಸೇರಿದಂತೆ ಕಾರ್ಯಕಾರಿಣಿಮಂಡಳಿಯ ಸದಸ್ಯರು ಇತ್ತೀಚೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ಡಾ. ಎಸ್. ಆರ್ ಚನ್ನವೀರಪ್ಪ ಅವರ ಮಾರ್ಗದರ್ಶನದಲ್ಲಿ “ ಆಧುನಿಕ ವಚನ ಪರಂಪರೆ ಮತ್ತು ನಿರುಪಾಧೀಶರ ವಚನಗಳು” ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿ ಪಡೆದಿದ್ದಕ್ಕಾಗಿ ಭೈರಮಟ್ಟಿಯವರಿಗೆ ಗೌರವ ಸನ್ಮಾನವನ್ನು ಸಮರ್ಪಿಸಿ ಅಭಿನಂದಿಸಿದರು.

RELATED ARTICLES

Most Popular

error: Content is protected !!
Join WhatsApp Group