ಮಸೀದಿ ಮೇಲೆ ಭಗವಾ ಧ್ವಜ ಹಾರಿಸಿದ ನಾಲ್ವರ ಬಂಧನ

Must Read

ಬೀದರ: ಬಸವಕಲ್ಯಾಣ ತಾಲ್ಲೂಕಿನ ಧನ್ನೂರಾ (ಕೆ) ಗ್ರಾಮದ ಜಾಮಿಯಾ ಮಸೀದಿ ಮೇಲೆ ಭಗವಾ ಧ್ವಜ ಹಾರಿಸಿದ ಆರೋಪದಡಿ ಗ್ರಾಮದ ನಾಲ್ಕು ಜನ ಯುವಕರನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ.

ಗ್ರಾಮದ ವೀರೇಶ ಶಿವಕುಮಾರ, ಕಲ್ಯಾಣಿ ರಾಜಕುಮಾರ ಸೂರ್ಯ, ಸುಶೀಲ ಶಿವಕುಮಾರ ಬಿರಾದಾರ, ಹಾಗೂ ಅಭಿಷೇಕ ಚಂದ್ರಕಾಂತ ಬಂಧಿತರಾಗಿದ್ದಾರೆ. ಸೆ. 20 ರಂದು ರಾತ್ರಿ ಧನ್ನೂರಾ (ಕೆ) ಗ್ರಾಮದ ನಾಲ್ಕು ಜನ ಯುವಕರು ಮದ್ಯ ಕುಡಿದು, ಅದೇ ಗ್ರಾಮದ ಹನುಮಾನ್ ದೇವಸ್ಥಾನದ ಮೇಲಿನ ಭಗವಾ ಧ್ವಜ ತೆಗೆದು, ಜಾಮಾ ಮಸೀದಿ ಮೇಲೆ ಕಟ್ಟಿದ್ದಾರೆ. ಮರುದಿನ ಮಸೀದಿಯ ಚಾಂದಸಾಬ್‌ ಸಲೀಂ ಸಾಬ್‌ ಪಠಾಣ ಎಂಬವರು ಕೊಟ್ಟ ದೂರಿನ ಮೇರೆಗೆ ಬಸವಕಲ್ಯಾಣ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಸೆ. 21ರಂದು ಪ್ರಕರಣ ದಾಖಲಿಸಲಾಗಿತ್ತು. ತನಿಖೆ ನಡೆಸಿ, ನಾಲ್ವರನ್ನು ಬಂಧಿಸಲಾಗಿದ್ದು, ಅಶಾಂತಿ ಉಂಟು ಮಾಡುವುದಕ್ಕಾಗಿಯೇ ದುಷ್ಕೃತ್ಯ ಎಸಗಿರುವುದಾಗಿ ನಾಲ್ವರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group