Homeಸುದ್ದಿಗಳುಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ಮೂಡಲಗಿ ತಾಲೂಕ ಪದಾಧಿಕಾರಿಗಳ ನೇಮಕಾತಿ

ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ಮೂಡಲಗಿ ತಾಲೂಕ ಪದಾಧಿಕಾರಿಗಳ ನೇಮಕಾತಿ

ಮೂಡಲಗಿ – ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆಯ ಮೂಡಲಗಿ ತಾಲೂಕಾ ಪದಾಧಿಕಾರಿಗಳ ನೇಮಕಾತಿ ಸಭೆಯು ಗುರುವಾರ 29 ಸೆಪ್ಟಂಬರ್ 2022 ರಂದು ಗುರ್ಲಾಪುರ ಐಬಿ ಯಲ್ಲಿ ನೆರವೇರಿತು.

ಬೆಳಗಾವಿ ಜಿಲ್ಲಾ ರೈತರ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ  ಸುರೇಶ ನಾಯ್ಕ ಅವರು ಮಾತನಾಡುತ್ತಾ,  ರೈತರು ಒಗ್ಗಟ್ಟಾಗಿರಬೇಕು ಒಗ್ಗಟ್ಟಿನಲ್ಲಿ ಬಲವಿದೆ. ದೇಶ ಕಾಯುವ ಯೋಧರು ನಮ್ಮನ್ನು ರಕ್ಷಿಸುತ್ತ ಇದ್ದರೆ ನಾವು ಎಲ್ಲರಿಗೂ ಅನ್ನವನ್ನು ನೀಡುವವರಾಗಿದ್ದೇವೆ. ಆದರೆ ನಮಗೆ ನ್ಯಾಯಯುತವಾಗಿ ಸಿಗಬೇಕಾದಂಥ ನಮ್ಮ ಬೆಳೆಗಳಿಗೆ ದರಗಳ ನಿಗದಿಯಾಗಿರಲಿ ಅತ್ಯುತ್ತಮ ಮಾರುಕಟ್ಟೆಯಾಗಲಿ ಸಿಗದೇ ಇರುವುದು ವಿಪರ್ಯಾಸವಾಗಿದೆ. ಎಲ್ಲರೂ ತಮ್ಮ ತಮ್ಮ ಸ್ವಾರ್ಥಕ್ಕಾಗಿ ದುಡಿದು ಉದ್ಯಮಪತಿಗಳು ಬೆಳೆಯುತ್ತಿದ್ದಾರೆ. ರಾಜಕಾರಣಿಗಳು ಸಹ ಬೆಳೆಯುತ್ತಿದ್ದಾರೆ. ಆದರೆ ರೈತ ಇನ್ನೂ ಎಲ್ಲಿದ್ದಾನೋ ಅಲ್ಲಿದ್ದಾನೆ ರೈತರ ಏಳಿಗೆಗಾಗಿ ಯಾರು ಯೋಚನೆ ಮಾಡಿ ಕಾರ್ಯಗತಗೊಳಿಸುತ್ತಿಲ್ಲ. ರೈತರಿಗೆ ಸಿಗಬೇಕಾದ ಸೌಲಭ್ಯ ಇನ್ನೂ ಸಿಗುತ್ತಿಲ್ಲ. ಆದ ಕಾರಣ ನಾವೆಲ್ಲ ರೈತರು ಒಗ್ಗಟ್ಟಾಗಿ ನಮ್ಮ ನಮ್ಮ ಸೌಲಭ್ಯಗಳಿಗೆ ಆಗ್ರಹಿಸಿ ಒಗ್ಗಟ್ಟಿನಿಂದ ಕೆಲಸ ಮಾಡಲು ಸಂಘಟನೆ ಅವಶ್ಯವಿದೆ .ಆದಕಾರಣ ಪ್ರತಿಯೊಬ್ಬ ಸದಸ್ಯರು ತಮ್ಮ ಸುತ್ತಮುತ್ತಲಿರುವ ರೈತರನ್ನು ಒಗ್ಗೂಡಿಸಿ ಸದಸ್ಯರನ್ನಾಗಿ ಮಾಡಲು ಕೋರುತ್ತೇನೆ. ರೈತರಿಗೆ ಅನ್ಯಾಯವಾದಾಗ ಹಗಲು ರಾತ್ರಿ ಎನ್ನದೆ  ರೈತರ ಜೊತೆಗೆ ಕೈ ಜೋಡಿಸಿ ನ್ಯಾಯ ಕೊಡಿಸಲು ಬದ್ಧರಾಗಿರುತ್ತೇವೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಅವರ ಜೊತೆಗೆ ಬೆಳಗಾವಿ ಜಿಲ್ಲಾ ಸಂಘಟನಾ ಸಂಚಾಲಕರಾದ  ಪಾರಿಶ್ ತಮ್ಮಣ್ಣ ಉಪ್ಪಿನ್. ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದಂತ ಅಜ್ಜಪ್ಪ ನಾಯಕರ್ , ಜಿಲ್ಲಾ ಸಹ ಕಾರ್ಯದರ್ಶಿಯಾದ  ರಮೇಶ್ ಕೋಳಿಗುಡ್. ಯರಗಟ್ಟಿ ತಾಲೂಕ ಅಧ್ಯಕ್ಷರಾದ ಪ್ರಕಾಶ್ ಸತ್ ನಾಯ್ಕರ್, ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್ ಅರಭಾವಿ, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷರಾದ ಸಿದ್ದಪ್ಪ ಸಿದ್ಧರಾಮ್ ನಡಹಟ್ಟಿ, ಕಲ್ಲಪ್ಪ ಭೀಮಪ್ಪ ರಂಗಾಪುರ, ಪ್ರಕಾಶ್ ರಾಮಪ್ಪ ಕಾಳಶೆಟ್ಟಿ ಜಿಲ್ಲಾ ಯುವ ಘಟಕದ ಅಧ್ಯಕ್ಷರು ಮೂಡಲಗಿ ತಾಲೂಕ ರೈತ ಹಿತ ರಕ್ಷಣಾ ಘಟಕದ ಗೌರವಾಧ್ಯಕ್ಷರಾಗಿ ಮಾದೇವ್ ಯಶವಂತ್ ಬಂಗೆನ್ನವರ್, ಅಧ್ಯಕ್ಷರಾಗಿ ಭೀಮಪ್ಪ ಶಂಕರ್ ರೊಡನ್ನವರ್, ಉಪಾಧ್ಯಕ್ಷರಾಗಿ ಸದಾಶಿವ್ ನಿಂಗಪ್ಪ ಗೌರಾನಿ, ಸದಸ್ಯರಾಗಿ ಮಲ್ಲಪ್ಪ ಯಮನಪ್ಪ ಕಬ್ಬೂರ್, ಬಸಣ್ಣಗುಳಪ್ಪ ಕಬ್ಬೂರು, ಮಲ್ಲಪ್ಪ ರಾಮಪ್ಪ ಜುಂಜುರ್ವಾಡ್ , ಅರ್ಜುನ್ ಸಿದ್ದಪ್ಪ ಮಾದಗೌಡ್ರು,ಮಾದೇವ ಗುರುಲಿಂಗಪ್ಪ ಬಿ ಪಾಟೀಲ್, ಗುರುಪಾದ ಸಾಬಪ್ಪ ರಬಕವಿ, ಭೀಮಪ್ಪ ಡವಳೇಶ್ವರ್, ಗಿರಮಲ್ಲ ಲಕ್ಕಪ್ಪ ಸಾಯನವರ್,ಮುತ್ತಪ್ಪ ರಬಕವಿ, ಲಕ್ಕಪ್ಪ ಹಡಗಿನಾಳ, ಶಿವಬಸು ಹುಚ್ಚನವರ್,ಮಾಂತೇಶ್ ಹೆಳವರ್, ಗುರುಲಿಂಗಪ್ಪ ಸವದಿ, ಬಸಪ್ಪ ಲಕ್ಕಪ್ಪ ಸವದಿ, ಶ್ರೀ ಶಿವಬಸು ಸುಳ್ಳನವರ್ ಪರುಶುರಾಮ್ ನಾಯಕ್,ಅಲ್ಲಪ್ಪ ಬೆಳವಿ,ಕಲ್ಲಪ್ಪ ಭೀಮಪ್ಪ ರಂಗಾಪುರ,ನಾಗೇಂದ್ರ ಗೌರಾನಿ,ಈಶ್ವರ ಮುಗಳಖೋಡ, ರಮೇಶ್ ಬೆಳವಿ,ಅಪ್ಪಣ್ಣ ಗೌಡ ತಿಮ್ಮಣ್ಣ ಪಾಟೀಲ್ ಕೆಂಪಣ್ಣ ಮ್ಯಾಳಗೋಳ,ಬಸವರಾಜ್ ಮುರಾಳಿ, ಸಿದ್ದಪ್ಪ ಅಯ್ಯಪ್ಪ ಕೋಟಗಿ, ಭೀಮಪ್ಪ ಚೆನ್ನಪ್ಪ ರಬಕವಿ, ಸೋಮಲಿಂಗ್ ಪರಪ್ಪ ರಬಕವಿ, ಶಿವಾಪುರ, ಹಳ್ಳೂರ ಮೂಡಲಗಿ, ಗುರ್ಲಾಪುರ್, ಕಬ್ಬೂರ, ಕುಳಲಿ ,ವೆಂಕಟಾಪುರ ಇನ್ನೂ ಹಲವು ಗ್ರಾಮಗಳಿಂದ ರೈತ ಬಾಂಧವರು  ಆಗಮಿಸಿದ್ದರು .ಭಾಗವಹಿಸಿದ್ದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು  ಮತ್ತು ಹಸಿರು ಶಾಲುಗಳೊಂದಿಗೆ ಸತ್ಕರಿಸಲಾಯಿತು.

ಈ ಕಾರ್ಯಕ್ರಮದ ನಿರ್ವಹಣೆಯನ್ನು ಸಂಗಪ್ಪ ಶಿವಲಿಂಗಪ್ಪ ಹಡಪದ ನಿರ್ವಹಿಸಿ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group