ಸತ್ಸಂಗದಿಂದ ಬದುಕು ಸುಂದರ – ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು

Must Read

ಮುಧೋಳ- ಶರಣರ ಸಂತ ಮಹಾಂತರ ಸಂಗದಿಂದ ಬದುಕು ಸುಂದರವಾಗುತ್ತದೆ ಎಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.

ಅವರು ತಾಲೂಕಿನ ಸುಕ್ಷೇತ್ರ ಮುಗಳಖೋಡ ಗ್ರಾಮಕ್ಕೆ ಆಗಮಿಸಿ ಭಕ್ತರಿಗೆ ದರ್ಶನ ನೀಡಿ ಮಾತನಾಡಿ, ನಮ್ಮ ಲೌಕಿಕ ಜೀವನ ಹಸನಾಗಿರಲು ಅರಿತವರ ಸಂಗವಿರಬೇಕೆಂದರು.

ಗ್ರಾಮದಲ್ಲಿ ಶ್ರೀಗಳ ಸದ್ಭಾವನಾ ಪಾದಯಾತ್ರೆ ಜನರಲ್ಲಿ ಸಮಾಧಾನ ಮೂಡಿಸಿತು. ಡಿ.ವಾಯ್.ಎಸ್.ಪಿ.ಮುತ್ತಣ್ಣ ಸರವಗೋಳ ಕುಟುಂಬದವರು ಶ್ರೀಗಳ ಪಾದಪೂಜೆ ಹಾಗೂ ಗೌರವ ಸಮರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ರಾಮಯ್ಯ ಸ್ವಾಮಿಗಳು ಹಿರೇಮಠ, ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಶರಣಬಸವಶಾಸ್ತ್ರಿಗಳು, ಗ್ರಾಮದ ಗಣ್ಯರಾದ ಆರ್.ಎಸ್.ಸುಣಗಾರ, ಗುರುಬಸು ಶಿವಾಪೂರ, ಎಂ.ಆರ್.ಮಂಟೂರ, ಗುರುಪಾದಪ್ಪ ಜನವಾಡ, ಪಿ.ಎಲ್.ಜನವಾಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು

Latest News

ಅಕ್ರಮ ಸಾರಾಯಿ ನಿಷೇಧಿಸಲು ಬಾಲಚಂದ್ರ ಜಾರಕಿಹೊಳಿ ಸೂಚನೆ

ಮೂಡಲಗಿ-ಅರಭಾವಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿಯನ್ನು ಕೂಡಲೇ ನಿಷೇಧಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳುವಂತೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಪೊಲೀಸ್ ಅಧಿಕಾರಿಗಳಿಗೆ...

More Articles Like This

error: Content is protected !!
Join WhatsApp Group