ಸಿಂದಗಿ: 2023-24ನೇ ಸಾಲಿನ ಆಯವ್ಯಯದಲ್ಲಿ ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣವಾಗಿ 1ನೇ ನವೆಂಬರ್-2023ಕ್ಕೆ, 50 ವರ್ಷ ಪೂರ್ಣಗೊಳ್ಳಲಿದೆ. ಈ ಶುಭ ಸಂದರ್ಭದಲ್ಲಿ “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ಹೆಸರಿನಲ್ಲಿ ಇಡೀ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ ಕರ್ನಾಟಕದ ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಘೋಷಣೆ ಮಾಡಿರುತ್ತಾರೆ. ಈ ನಿಮಿತ್ತವಾಗಿ ಕನ್ನಡ ರಥವು ಜ.27ರಂದು ಸಿಂದಗಿ ಮತಕ್ಷೇತ್ರದ ಆಲಮೆಲ ತಾಲೂಕಿನಿಂದ ಸಿಂದಗಿ ತಾಲೂಕಿಗೆ ಆಗಮಿಸಲಿದ್ದು ಈ ರಥವನ್ನು ಪಟ್ಟಣದ ಗಾಂಧೀಜಿ ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತಿಸಿಕೊಂಡು ಪಟ್ಟಣದ ಬಸವೇಶ್ವರರ ವೃತ್ತದಲ್ಲಿ ಕಲಾ ಪ್ರದರ್ಶಿಸಿ ರಥವನ್ನು ಬೀಳ್ಕೊಡೋಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಬಸವ ಕಲ್ಯಾಣದಿಂದ ಈ ಕ್ಷೇತ್ರಕ್ಕೆ ಆಗಮಿಸಲಿರುವ ಕನ್ನಡ ರಥದ ಸ್ವಾಗತದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಮಾತನಾಡಿ, ಜಿಲ್ಲಾದ್ಯಂತ ಸಂಚರಿಸುವ ಸಂಧರ್ಭದಲ್ಲಿ ಶಿಷ್ಟಾಚಾರದನ್ವಯ ಬರಮಾಡಿಕೊಂಡು ಬೀಳ್ಕೊಡಲು ಕ್ರಮ ಕೈಗೊಳ್ಳಲು ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಬೆಂಗಳೂರು ಇವರ ಸುತ್ತೋಲೆಯಂತೆ ಅಪರ ಜಿಲ್ಲಾಧಿಕಾರಿಗಳ ಆದೇಶದನ್ವಯ ಕರ್ನಾಟಕ ಸಂಭ್ರಮ -50ರ ಅಂಗವಾಗಿ ಜ್ಯೋತಿ ರಥಯಾತ್ರೆಯ ಸ್ವಾಗತ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಬಸವ ಕಲ್ಯಾಣದಿಂದ ಆಲಮೇಲ್, ಕೋರಹಳ್ಳಿ, ಕಲಹಳ್ಳಿ, ರಾಂಪುರ, ಸಿಂದಗಿ, ದೇವರಹಿಪ್ಪರಗಿ (ವಾಸ್ತವ) ಜ.27 ರಂದು ಬೆಳಗ್ಗೆ ಆಲಮೇಲ್ ತಾಲ್ಲೂಕಿಗೆ ಆಗಮಿಸಲ್ಲಿದ್ದು ಗೌರವಯುತವಾಗಿ ಬರಮಾಡಿಕೊಳ್ಳುವುದು ಹಾಗೂ ಕೋರಹಳಿ, ಕಲಹಳ್ಳಿ, ರಾಂಪುರ ಮಾರ್ಗವಾಗಿ ಸಿಂದಗಿ, ಚಿಕ್ಕ ಸಿಂದಗಿ ಮಾರ್ಗವಾಗಿ ದೇವರಹಿಪ್ಪರಗಿವರೆಗೆ ಗಡಿ ಭಾಗದ ಮುಕ್ತಾಯದ ವರೆಗೆ ಸಂಚರಿಸಬೇಕು ಅಲ್ಲದೆ ಜ.27 ರಿಂದ ಫೆ. 12ರ ವರೆಗೆ ವಿಜಯಪುರ ಜಿಲ್ಲಾದ್ಯಂತ ಕರ್ನಾಟಕ ಸಂಭ್ರಮ 50ರ ಜ್ಯೋತಿ ರಥಯಾತ್ರೆ ಸಂಚರಿಸಲ್ಲಿದ್ದು ಈ ಹಿನ್ನೆಲೆಯಲ್ಲಿ, ಕರ್ನಾಟಕ ಸಂಭ್ರಮ-50 ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ನಿಮಿತ್ತವಾಗಿ 2023 ನವೆಂಬರ್ 01 ರಿಂದ 2024 ನವಂಬರ್ ವರೆಗೆ ರಾಜ್ಯಾದ್ಯಂತ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸದರಿ ರಥಯಾತ್ರೆಯಲ್ಲಿ ತಾಲ್ಲೂಕಿನ ಜನಪ್ರತಿನಿಧಿಗಳು ಹಾಗೂ ಕನ್ನಡ ಪರ ಒಕ್ಕೂಟಗಳು ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಸಾಹಿತಿಗಳು | ಚಿಂತಕರುಗಳಿಗೆ ಆಹ್ವಾನಿಸುವುದು ಕೊನೆಗೆ ಸಿಂದಗಿ ತಹಶಿಲ್ದಾರರಿಂದ ದೇವರ ಹಿಪ್ಪರಗಿ ತಹಶೀಲ್ದಾರರಿಗೆ ಬೀಳ್ಕೊಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಿವಾನಂದ ಉಪಸ್ಥಿತರಿದ್ದರು.